Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಎಂ ಜೊತೆಗೆ ಮಹದೇವಪ್ಪನವರ ಮೊಮ್ಮಗ ಹೋಗಿದ್ಯಾಕೆ…? ಪ್ರೋಟೋಕಾಲ್ ಉಲ್ಲಂಘನೆ ಬಗ್ಗೆ ಸಚಿವರ ಪ್ರತಿಕ್ರಿಯೆ

---Advertisement---

ಮೈಸೂರು: ಸಿಎಂ ಸಿದ್ದರಾಮಯ್ಯ ಇದ್ದ ಜೀಪ್ ನಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಮೊಮ್ಮಗನನ್ನು ಕರೆದುಕೊಂಡು ಹೋಗಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ.ಮಹದೇವಪ್ಪ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನೋಡಿಲ್ಲ, ಕೇಳಿದೆ ಎಂದಿದ್ದಾರೆ.

ಸಹಜವಾಗಿ ಮುಖ್ಯಮಂತ್ರಿಗಳು ದಸರಾ ದಿನ, ಉದ್ಘಾಟಕರ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಹಾಗೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ. ಅದಾದ ಮೇಲೆ ದಸರಾ 11ನೇ ದಿನ ಆಚರಿಸುತ್ತಾರೆ. ನಂದಿ ಕಂಬಕ್ಕೆ ಪೂಜೆಯನ್ನ ಸಲ್ಲಿಸ್ತಾರೆ. ಅಲ್ಲಿಂದ ವಾಪಾಸ್ ನಮ್ಮ ಸ್ಥಳಕ್ಕೆ ಬಂದು ಕುಳಿತು ಕೊಳ್ತೇವೆ. ಅದರಲ್ಲಿ ಪ್ರೋಟೋಕಾಲ್ ಅಂತೆಲ್ಲಾ ಏನಿಲ್ಲ. ಹೇಗೆ ಬೇಕಾದರೂ ಹೋಗಬಹುದು. ಸುಮ್ಮನೆ ಹೋಗುವ ಬದಲು, ಅಷ್ಟೊಂದು ಜನ ಸೇರಿದ್ದಾರೆ. ಜನಗಳಿಗೆ ಕೈ ಬೀಸಿ, ಕೃತಜ್ಞತೆಯ ಭಾವವನ್ನ ನೀಡಬೇಕು. ನಾವೆಲ್ಲಾ ಭಾರತೀಯರು, ವೈವಿಧ್ಯತೆಯಿಂದ ಏಕತೆಯಿಂದ ಜಾತಿ, ಧರ್ಮ, ರಾಜಕಾರಣವನ್ನು ಮೀರಿ ನಮ್ಮ ದೇಶವನ್ನು ಕಟ್ಟೋಣಾ ಅನ್ನೋದನ್ನ ಒಬ್ಬ ನಾಯಕನಾಗಿ ಮಾಡಬೇಕು ಅನ್ನೋದನ್ನ ಬಿಟ್ರೆ, ದಸರಾ ಆಚರಣೆ ಯಾರಿಗೆ ಗೊತ್ತಿಲ್ಲ ಅಂತವರು ಇದನ್ನೆಲ್ಲಾ ಸೃಷ್ಟಿ ಮಾಡಿರೋದು.

ಆ ಮಗು ಬಂದಿದ್ದಕ್ಕೂ ಪ್ರೋಟೋಕಾಲ್ ಇಲ್ಲ, ಸೆಲ್ಯೂಟ್ ಇಲ್ಲ. ಅದು ಬಿಟ್ಟು ಅಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ. ಸಿಎಂ ಅವರಿಗೆ ಪ್ರೋಟೋಕಾಲ್ ಇರುತ್ತದೆ. ಹಾಗೇ ಯಾರೆಂದರೆ ಹಾಗೇ ಸಿಎಂ ಜೊತೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಮಹದೇವಪ್ಪ ಅವರ ಮೊಮ್ಮಗ ಹೋಗಿದ್ದಕ್ಕೆ ಸಾಕಷ್ಟು ಚರ್ಚೆಗಳಾಗಿತ್ತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now