ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಚಿತ್ರದುರ್ಗ : ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ವಾನ್ ಸಿ.ಆರ್.ಶಿವಪ್ರಕಾಶ್ ಹಾಗೂ ಡಾ.ನಂದಿನಿ ಶಿವಪ್ರಕಾಶ್ ಇವರುಗಳಿಂದ ನೃತ್ಯ ಕಲಿತಿರುವ ಶಿವಾನಿ ಕೆ.ಆರ್. ಇವರು ಸೆ.28 ರಂದು ಸಂಜೆ ಐದು ಗಂಟಗೆ ವಾಸವಿ ಮಹಲ್ನಲ್ಲಿ ಭರತನಾಟ್ಯ ರಂಗ ಪ್ರವೇಶಿಸಲಿದ್ದಾರೆ.
ಕೆ.ರಾಜೇಶ್ ಹಾಗೂ ಪೂರ್ಣಿಮ ದಂಪತಿಯ ಪುತ್ರಿ ಶಿವಾನಿ ಕೆ.ಆರ್. ಪೋಷಕರು ಹಾಗೂ ಹಿರಿಯರ ಆಸೆಯಂತೆ ಐದನೆ ವಯಸ್ಸಿನಲ್ಲಿಯೇ ಅಂಜನಾ ನೃತ್ಯಕಲಾ ಕೇಂದ್ರ ಪ್ರವೇಶಿಸಿ ಓದಿನ ಜೊತೆಗೆ ನೃತ್ಯದಲ್ಲಿಯೂ ಜೂನಿಯರ್ ಹಾಗೂ ಸೀನಿಯರ್ ಹಂತದ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.




