ಹುಬ್ಬಳ್ಳಿ: ನಗರದಲ್ಲಿಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆದಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಯಡಿಯೂರಪ್ಪ ಅವರ ಬಗ್ಗೆ ಮತ್ತೆ ಕಿಡಿಕಾರಿದ್ದಾರೆ. ಇವತ್ತಿನ ಸಭೆಯಲ್ಲಿ ಹಿಂದೂ ಅಂತ ಬರೆಸುವುದಕ್ಕೆ ಒಪ್ಪಿಕೊಂಡರೆ ತಮ್ಮ ನಿರ್ಧಾರ ಏನಿರುತ್ತೆ ಎಂದು ಕೇಳಿದಾಗ, ನಾವೂ ಸ್ವಾಗತ ಮಾಡ್ತೇವೆ. ಹಿಂದೂ ಅಂತ ಬರೆಸಲೇಬೇಕು. ಎಲ್ಲಿ ಹಿಂದೂ ಧರ್ಮವನ್ನು ಅಪಮಾನ ಮಾಡುತ್ತಾರೆ ಅಲ್ಲಿಗೆ ನಾನು ಹೋಗುವುದಿಲ್ಲ ಎಂದಿದ್ದಾರೆ.
ಕೇಸರಿ ಸನಾತನ ಧರ್ಮದ ಸಂಕೇತವಿದೆ. ಇಸ್ಲಾಂ ಮತ್ತು ಲಿಂಗಾಯತರಲ್ಲಿ ಬಹಳಷ್ಟು ಸಾಮ್ಯತೆ ಇದೆ ಅಂತ ಒಬ್ಬ ಬೂಟ್ ಹೇಳ್ತಾನೆ. ಇಲ್ಲೊಬ್ಬ ಇದಾನಲ್ಲ ನಿಜಗುಣನಾನಂದ ಅವ ಹೇಳ್ತಾನೆ. ಹಿಂದೂ ಧರ್ಮ ಅಲ್ಲ ಲಿಂಗಾಯತ. ಲಕ್ಷ್ಮೀ ಪೂಜೆ ಯಾಕೆ ಮಾಡ್ತೀರಿ..? ನೀ ಯಾಕ್ ವಿಭೂತಿ ಹಚ್ಕೊಳ್ತೀಯಪ್ಪ ಸ್ವಾಮೀಜಿ. ಆಕಳ ಸಗಣಿಯಿಂದಾನೇ ಯಾಕೆ ವಿಭೂತಿ ತಯಾರು ಮಾಡ್ಬೇಕು ಅಂತ ಕೇಳ್ತಾನೆ. ಹಾಗಾದ್ರೆ ನಾಯಿ, ಹಂದಿಯದ್ದು ಮಾಡ್ಕೊಂಡು ನೀ ಹಚ್ಕೊ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಇದೆ ವೇಳೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿ, ಯಡಿಯೂರಪ್ಪ ಲಿಂಗಾಯತನೇ ಅಲ್ಲ. ಅದು ವಿಶೇಷ. ಬಳಗಾರರು ಅವರು. ಯಡಿಯೂರಪ್ಪ ಹೇಳಪ್ಪ. ಮಂಡ್ಯ ಸುತ್ತ ಮುತ್ತ ಇದಾರಾ. ಅವ್ರು ಬಂದು ಇಲ್ಲಿ ಲೀಡರ್ ಆಗವ್ರೆ ಪುಕ್ಸಟ್ಟೆ. ಒಮ್ಮೆಯಾದ್ರೂ ಲಿಂಗಾಯತ ಅಲ್ಲ ಅಂದಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟವ್ರ ಯಡಿಯೂರಪ್ಪ ಆಗ್ಲಿ, ಮಕ್ಕಳಾಗಲಿ. ಲಿಂಗಾಯತರ ಬೀಗತನ ಮಾಡಿಕೊಂಡು ನಾವೂ ಲಿಂಗಾಯತರು ಅಂತ ಹೇಳಿಕೊಳ್ತಾರೆ ಅಷ್ಟೆ ಅಂತ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹರಿಹಾಯ್ದಿದ್ದಾರೆ.












