ದಕ್ಷಿಣ ಕನ್ನಡ: ಧರ್ಮಸ್ಥಳದ ತಲೆಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತನಿಖೆ ನಡೆಯುತ್ತಿದೆ. ಬುರುಡೆ ತಂದಿದ್ದೀನಿ, ಹೆಣಗಳನ್ನ ಹೂತಾಕಿದ್ದೀನಿ ಅಂತ ಬಂದ ವ್ಯಕ್ತಿಯ ಹಿಂದೆ ಬಿದ್ದಿತ್ತು ಎಸ್ಐಟಿ. ತೋರಿಸಿದ ಕಡೆಯಲ್ಲೆಲ್ಲಾ ಅಗೆದು ಸಾಕಾದ ಎಸ್ಐಟಿ ಕಡೆಗೆ ಚಿನ್ನಯ್ಯನನ್ನ ಅರೆಸ್ಟ್ ಮಾಡಿದೆ. ಆತನ ಹಿಂದೆ ಇರುವ ಕೈವಾಡ ಯಾವುದು ಅಂತ ಹುಡುಕಾಟ ಶುರು ಮಾಡಿರುವ ಎಸ್ಐಟಿ ಗೆ ಸಾಕ್ಷಿಯ ಕೊರತೆಯಾಗುತ್ತಿದೆ ಎನ್ನಲಾಗಿದೆ.
ಸದ್ಯ ಬುರುಡೆ ಕೇಸಲ್ಲಿ ಚಿನ್ನಯ್ಯ ಲಾಕ್ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣನವರ್, ಜಯಂತ್, ಯೂಟ್ಯೂಬರ್ಸ್ ಗಳನ್ನೆಲ್ಲಾ ತನಿಖೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರಬಲ ಸಾಕ್ಷ್ಯಾಧಾರದ ಕೊರತೆ ಇಲ್ಲಿ ಕಾಡುತ್ತಿರುವ ಕಾರಣ, ಇಲ್ಲಿ ಚಿನ್ನಯ್ಯನನ್ನು ಬಿಟ್ಟರೆ ಬೇರೆ ಯಾರನ್ನು ಅರೆಸ್ಟ್ ಮಾಡಲು ಆಗುತ್ತಿಲ್ಲ.
ಮೊಬೈಲ್ ಡೇಟಾ ಮಾತ್ರ ಸದ್ಯಕ್ಕೆ ಸಿಕ್ಕಿರುವ ಸಾಕ್ಷುಯಾಗಿದೆ. ಅನುಮಾನಗೊಂಡವರ ಮೊಬೈಲ್ ಗಳನ್ನ ಎಸ್ಐಟಿ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ಅದರಲ್ಲೂ ಗಿರೀಶ್ ಮಟ್ಟಣ್ಣನವರ್ ಕಾಲ್ ಲೀಸ್ಟ್ ನೋಡಿದಾಗ ಚಿನ್ನಯ್ಯನೇ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇಂದು ವಿಚಾರಣೆಗೆ ಕೇರಳದ ಯೂಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ ಹಾಜರಾಗಿದ್ದರು. ಬಳಿಕ ಮಾತನಾಡಿದ್ದ ಮನಾಫ್, ಎಸ್ಐಟಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತ್ಯ ಹೊರಗಡೆ ಬರುತ್ತೆ. ಸತ್ಯದ ಹೋರಾಟದಲ್ಲಿ ಸುಳ್ಳು ಹಾದಿ ಹಿಡಿಯೋದು ತಪ್ಪು ಎಂದು ಮನಾಫ್ ಹೇಳಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿರುದ್ಧ ಸಾಕ್ಷಿ ಸಿಗುವುದೇ ಕಷ್ಟಕರವಾಗಿದೆ. ಈಗಲೂ ತನಿಖೆ ನಡೆಯುತ್ತಿದೆ.















