ವಿದ್ಯಾನಗರಕ್ಕೆ ಹರಿದ ಶಾಂತಿಸಾಗರ ನೀರು : ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಅಭಿನಂದನೆ

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ನಗರದ ವಿದ್ಯಾನಗರ ಬಡಾವಣೆಗೆ ಜುಲೈ 29 ರಿಂದ ಶಾಂತಿಸಾಗರ ನೀರು ಸರಬರಾಜು ಆದ ಹಿನ್ನೆಲೆಯಲ್ಲಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಾಸಕ ವೀರೇಂದ್ರ ಪಪ್ಪಿ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವಿದ್ಯಾನಗರ ಬಡಾವಣೆ ನಿರ್ಮಾಣವಾಗಿ ಇಷ್ಟು ವರ್ಷಗಳಾದರೂ ನಗರಕ್ಕೆ ಶಾಂತಿಸಾಗರ ನೀರಿಲ್ಲದೆ ಇಲ್ಲಿನ ನಿವಾಸಿಗಳಯ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದರು. ಈ ನೀರಿನಲ್ಲಿ ನೈಟ್ರೇಟ್, ಸಲ್ಪೇಟ್ ಮತ್ತು ವಿಷಪೂರಿತ ರಾಸಾಯಿನಿಕಗಳಿಂದ ಕಲುಷಿತವಾಗಿತ್ತು. ಅಷ್ಟೇ ಅಲ್ಲದೇ ಬಡಾವಣೆಯ ಉತ್ತರ ದಿಕ್ಕಿಗೆ ಮಲ್ಲಾಪುರ ಕೆರೆ ಪಕ್ಕದಲ್ಲಿರುವುದರಿಂದ ಈ ಕೆರೆಗೆ ಚಿತ್ರದುರ್ಗ ನಗರದ ಚರಂಡಿಯ ಮೂಲಕ ಕಲುಷಿತ ನೀರು, ಯು.ಜಿ.ಡಿ. ಗಲೀಜು ಕೂಡ ಕೆರೆಗೆ ಸೇರುತ್ತದೆ. ಇದರಿಂದ ಮಲ್ಲಾಪುರ ಕೆರೆಯ ನೀರು ಸಂಪೂರ್ಣ ಮಲೀನಗೊಂಡಿರುವುದರಿಂದ ಈ ನೀರನ್ನು ಬಳಸಲು ಹಾಗೂ ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂದು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬಡಾವಣೆಗೆ ಶಾಂತಿಸಾಗರ ನೀರು ಸರಬರಾಜು ಮಾಡುವಂತೆ ಕಳೆದ ಜುಲೈ 25 ರಂದು ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯತಿ ಸಿಇಒ ಮತ್ತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ತೀವ್ರವಾಗಿ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ (ಜುಲೈ. 29 ರಿಂದ) ವಿದ್ಯಾ ನಗರಕ್ಕೆ ನೀರು ಸರಬರಾಜು ಆಗಿದೆ. ಆದ್ದರಿಂದ ಇಲ್ಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತಕ್ಕೆ ಹಾಗೂ ಮೆದೆಹಳ್ಳಿ ಗ್ರಾಮ ಪಂಚಾಯತಿಯವರಿಗೂ ಮತ್ತು
ಸಹಕರಿಸಿದ ಎಲ್ಲರಿಗೂ ವಿದ್ಯಾನಗರದ ನಿವಾಸಿಗಳು ಪರವಾಗಿ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ (ರಿ.), ಚಿತ್ರದುರ್ಗ ಸಂಘದಿಂದ  ಶಾಸಕ ವೀರೇಂದ್ರ ಪಪ್ಪಿ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks