ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಆಗಾಗ ದರ್ಶನ್ ಫ್ಯಾನ್ಸ್ ಹಲ್ಲೆ ಮಾಡಿದ್ರು, ಬೆದರಿಕೆ ಹಾಕಿದ್ರು ಅಂತ ಹೇಳ್ತಾನೇ ಇರ್ತಾರೆ. ಇತ್ತೀಚೆಗಷ್ಟೇ ದರ್ಶನ್ ಫ್ಯಾನ್ಸ್ ವಿರುದ್ಧ ಸ್ಟೇ ಕೂಡ ತಂದಿದ್ರು. ಇದೀಗ ನಿನ್ನೆಯಿಂದಾನೂ ದರ್ಶನ್ ಫ್ಯಾನ್ಸ್ ಹಲ್ಲೆಮಾಡಿದ್ರು. ಅಲ್ಲಿಯೇ ಇದ್ದ ರಕ್ಷಕ್ ಬುಲೆಟ್ ಸಹಾಯಕ್ಕೆ ಬರಲಿಲ್ಲ ಅಂತೆಲ್ಲಾ ಹೇಳಿರುವ ಆಡಿಯೋ ವೈರಲ್ ಆಗಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳಿಗೆ ಮೋಹಕ ತಾರೆ ರಮ್ಯಾ ಕೂಡ ಖಡಕ್ ಆಗಿಯೇ, ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಅಶ್ಲೀಲ ಮೆಸೇಜ್ ಗಳ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ರೇಣುಕಾಸ್ವಾಮಿ ಮೆಸೇಜ್ ಗೂ, ಡಿ ಬಾಸ್ ಫ್ಯಾನ್ಸ್ ಗೂ ವ್ಯತ್ಯಾಸವೇನು ಇಲ್ಲ. ಡಿ ಫ್ಯಾನ್ಸ್ ಗಳು ಸ್ತ್ರೀ ದ್ವೇಷದ ಮನಸ್ಥಿತಿ ಹೊಂದಿದ್ದಾರೆ. ಟ್ರೋಲ್ ಗಳಿಂದ ಮಹಿಳೆಯರು, ಯುವತಿಯರಿಗೆ ಕಿರುಕುಳ ಶುರುವಾಗಿದೆ ಅಂತ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಕಿಡಿಕಾರಿದ್ದಾರೆ.
ಇದೇ ವಿಚಾರದಲ್ಲಿ ರಮ್ಯಾ, ದರ್ಶನ್ ಫ್ಯಾನ್ಸ್ ನೇರವಾಗಿಯೇ ಸವಾಲೊಂದನ್ನ ಹಾಕಿದ್ದಾರೆ. ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ನನ್ನ ಇನ್ಸ್ಟಾಗ್ರಾಮ್ ಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಮೆಂಟ್ ಗಳೇ ಸಾಕ್ಷಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಸವಾಲನ್ನ ಹಾಕಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವೆ ವಾರ್ ಜೋರಾಗಿದೆ. ಆ ಕಡೆ ಒಳ್ಳೆ ಹುಡುಗ ಪ್ರಥಮ್ ಕೂಡ ದರ್ಶನ್ ಫ್ಯಾನ್ ಮೇಲೆ ಗರಂ ಆಗಿದ್ದಾರೆ.




