Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಾಮಾರಿ ಮಲೇರಿಯಾಗೆ ಸಿಕ್ತು ಔಷಧಿ..!

---Advertisement---

ಮಳೆಗಾಲದಲ್ಲಿ ಒಂದಷ್ಟು ರೋಗಗಳು ಹೆಚ್ಚಾಗುತ್ತವೆ. ನಿಂತ ನೀರಿನಿಂದ ವೈರಸ್ ಗಳು ಉದ್ಭವವಾಗುತ್ತವೆ. ಅದರ ಪರಿಣಾಮವೇ ದೇಹದಲ್ಲಿ ಹಲವು ಕಾಯಿಲೆಗಳು ಕಾಣಿಸಿಕೊಳ್ಳುವುದು. ಅದರಲ್ಲಿ ಮಲೇರಿಯಾ ಕೂಡ ಒಂದು. ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ಈ ರೋಗ ಬರುತ್ತದೆ. ಈ ಮಲೇರಿಯಾಗೆ ಇಷ್ಟು ದಿನ ಯಾವುದೇ ರೀತಿಯ ಔಷಧ ಇರಲಿಲ್ಲ. ಇದೀಗ ಔಷಧವನ್ನ ಕಂಡು ಹಿಡಿದಿದ್ದಾರೆ.

ಈ ಮೂಲಕ ಭಾರತ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೇಶದ ಮೊದಲ ಮಲೇರಿಯಾ ಲಸಿಕೆ ಆಡ್ ಪಾಲ್ಸಿವಾಕ್ಸ್ ಅನ್ನು ಕಂಡು ಹಿಡಿದಿದೆ. ಈ ಲಸಿಕೆ ಮಲೇರಿಯಾ ಸೋಂಕುಗಳಲ್ಲಿ ಅತ್ಯಂತ ಮಾರಕ ಎಂದು ಎಂದು ಪರಿಗಣಿಸಲಾಗಿರುವ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ ಫಾಲ್ಸಿಪ್ಯಾರಮ್ ಅನ್ನು ನಾಶಪಡಿಸುವ ಮೂಲಕ ಮಲೇರಿಯಾ ಬರದಂತೆ ತಡೆಯುತ್ತದೆ. ಹಾಗಾದ್ಋ ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ‌ ಇಲ್ಲಿದೆ.

ಈ ಲಸಿಕೆ ಮಲೇರಿಯಾ ಸೋಂಕು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಯುವ ಲಸಿಕೆಯಾಗಿದೆ. ಹೆಚ್ಚುವರಿಯಾಗಿ, ಈ ಲಸಿಕೆಯು ನಮ ದೇಹವನ್ನು ರಕ್ಷಿಸುವುದಲ್ಲದೆ ಮಲೇರಿಯಾ ಹರಡುವುದನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲ ಮಲೇರಿಯಾ ಮತ್ತೆ ದೇಹವನ್ನು ಪ್ರವೇಶಿಸುವುದನ್ನು ತಡೆಯುವ ಒಂದು ರೀತಿಯ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಸೃಷ್ಟಿಸುವಂತೆ ಈ ಲಸಿಕೆ‌ ಮಾಡುತ್ತದೆ. ಈ ಲಸಿಕೆಯನ್ನು ಭಾರತದಲ್ಲಿಯೇ ಸಂಪೂರ್ಣವಾಗಿ ತಯಾರಿಸಲಾಗಿದೆ. ಹೀಗಾಗಿ ಮೇಕ್ ಇನ್ ಇಂಡಿಯಾ ಉಪಕ್ರಮದ ಒಂದು ಭಾಗವಾಗಿದೆ. ಇದರರ್ಥ ಭಾರತವು ಇನ್ನು ಮುಂದೆ ಮಲೇರಿಯಾ ಲಸಿಕೆಗಾಗಿ ವಿದೇಶಗಳನ್ನು ಅವಲಂಬಿಸುವುದಿಲ್ಲ. ಬದಲಾಗಿ ನಮ್ಮ ದೇಶದಲ್ಲಿಯೇ ಅದನ್ನು ತಯಾರಿಸಿ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಅದು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment