Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರಿ ವಕೀಲರು vs ದರ್ಶನ್ ಪರ ವಕೀಲರು : ವಾದ – ಪ್ರತಿವಾದದ ಮಾಹಿತಿ ಇಲ್ಲಿದೆ

---Advertisement---

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅಂಡ್ ಟೀಂಗೆ ನೀಡಿದ್ದ ಜಾಮೀನು ಪ್ರಶ್ನಿಸಿ, ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪು ಬರಲಿದೆ. ಈಗಾಗಲೇ ಎರಡು ಕಡೆಯ ವಕೀಲರಿಂದ ಸುಪ್ರೀಂ ಕೋರ್ಟ್ ನಲ್ಲಿ ವಾದ ಪ್ರತಿವಾದ ಶುರುವಾಗಿದೆ. ನ್ಯಾ.ಪರ್ದಿವಾಲಾ, ನ್ಯಾ.ಮಹದೇವನ್ ನೇತೃತ್ವದ ಪೀಠದಲ್ಲು ವಿಚಾರಣೆ ನಡೆಯುತ್ತಿದೆ. ಎಷ್ಟು ಅರ್ಜಿಗಳು ನಮ್ಮ ಮುಂದೆ ಇದಾವೆ ಎಂದು ಜಡ್ಜ್ ಕೇಳಿದಾಗ, ಏಳು ಅರ್ಜಿಗಳು ಎಂದು ಲೂತ್ರಾ ಮಾಹಿತಿ ನೀಡಿದ್ದಾರೆ. ಈ ಏಳು ಜನರ ಜಾಮೀನು ರದ್ದುಗೊಳಿಸಲು ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆಯಾ ಎಂದು ಕೇಳಿದಾಗ ಲೂತ್ರಾ ಅವರು ಹೌದು ಎಂದಿದ್ದಾರೆ.

ಇದೇ ವೇಳೆ ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೋತ್ರಾ ಅವರಿಗೆ ಜಡ್ಜ್ ಪ್ರಶ್ನೆ ಕೇಳಿದ್ದು, ಈಗ ದೋಷಾರೋಪ ಪಟ್ಟಿ ದಾಖಲಾಗಿದೆಯೇ..? 17 ಜನ.. ಆದರೆ ಏಳು ಜನರ ಜಾಮೀನು ರದ್ಧತಿ ಬಗ್ಗೆ ಕೇಳ್ತಾ ಇದ್ದೀರಿ. ಚಾರ್ಜ್ ಶೀಟ್ ಆಗಿದ್ಯಾ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಸದ್ಯ ಏಳು ಜನರ ಆದೇಶ ಬರಲಿ ಅದು ರದ್ಧಾದ ಮೇಲೆ ಇನ್ನುಳಿದವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆ ಮಾಡ್ತೇವೆ ಎಂದು ಲೂತ್ರಾ ಅವರು ಉತ್ತರ ಕೊಟ್ಟಿದ್ದಾರೆ.

ಜೊತೆಗೆ ರೇಣುಕಾಸ್ವಾಮಿ ಏನು ಮಾಡಿದ, ಕಿಡ್ನ್ಯಾಪ್ ಆಗಿದ್ದು, ಕೊಲೆಯಾಗಿದ್ದರ ಸಂಪೂರ್ಣ ಮಾಹಿತಿಯನ್ನ ತಿಳಿಸಿದ್ದಾರೆ. ಸದ್ಯ ಸರ್ಕಾರದ ಪರ ವಕೀಲರಿಗೆ ವಾದ ಮಾಡಲು ಅವಕಾಶ ನೀಡಿದ್ದು, ಅವರ ಬಳಿಕ ದರ್ಶನ್ ಪರ ಸಿದ್ದಾರ್ಥ್ ದವೆ ಅವರು ವಾದ ಮಂಡನೆ ಮಾಡಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...