Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರ ದೇಗುಲ : ಚಿತ್ರದುರ್ಗದ ಏಕನಾಥೇಶ್ವರಿ ದೇವಾಲಯ ಮಾಹಿತಿ…!

---Advertisement---

ವಿಶೇಷ ಲೇಖನ
ಡಾ.ಕೆ.ವಿ.ಸಂತೋಷ್, ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936

ಸುದ್ದಿಒನ್ : ಚಿತ್ರದುರ್ಗದ ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ದೇವಾಲಯಗಳಲ್ಲಿ ಒಂದಾದ ಏಕನಾಥೇಶ್ವರಿ ದೇವಾಲಯವು ನವದುರ್ಗೆಯರಲ್ಲಿ ಒಂದಾಗಿದೆ.
ಚಿತ್ರದುರ್ಗದ ಯಾವುದೇ ಪ್ರಮುಖ ಜಾತ್ರೆ,ಹಬ್ಬ ಸಮಾರಂಭಗಳು, ಪ್ರಾರಂಭವಾಗುವುದು ಈ ದೇವರ ಸನ್ನಿಧಾನದಿಂದಲೇ.ದಕ್ಷಿಣಾಭಿಮುಖವಾಗಿ ವಿಜಯನಗರ ಶೈಲಿಯಲ್ಲಿ 14ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು ಚಿತ್ರದುರ್ಗದ ಬೆಟ್ಟದ ಮೇಲೆ ಇರುವ ದೇವಾಲಯವಾಗಿದೆ.

ಬೃಹತ್ತಾದ ಬಂಡೆಗಲ್ಲಿನ ಕೆಳಭಾಗದ ವಿಶಾಲವಾದ ಗುಹೆಯಲ್ಲಿ ಗರ್ಭಗೃಹ,ಸಭಾಮಂಟಪಗಳು ಹಾಗೂ ಮುಂಭಾಗದಲ್ಲಿ ಪಾಳೆಗಾರರ ಕಾಲದಲ್ಲಿ ಕಟ್ಟಲಾದ ಮುಖಮಂಟಪ, ದೀಪಸ್ಥಂಭ,ಉಯ್ಯಾಲೆ ಕಂಬಗಳುಳ್ಳ ದೇವಾಲಯ ಇದಾಗಿದೆ.
ಗರ್ಭಗೃಹದಲ್ಲಿ ಬೃಹತ್ ಬಂಡೆಗಲ್ಲಿನ ಮೇಲೆ ಏಕನಾಥೇಶ್ವರಿ ದೇವಿಯ ತಲೆ ಮತ್ತು ಎದೆ ವರೆಗಿನ ಭುಜಗಳುಳ್ಳ ಉಬ್ಬುಶಿಲ್ಪವನ್ನು ಕಡೆಯಲಾಗಿದೆ. ಜಟಾ ಮುಕುಟಧಾರಿಯಾದ ದೇವತೆಯ ತಲೆಯ ಮೇಲೆ ಏಳುಹೆಡೆಯ ಸರ್ಪವಿದೆ. ಗರ್ಭಗೃಹದಲ್ಲಿ ಚೌಡಮ್ಮ, ಬರಗೆರಮ್ಮ,ತಿಪ್ಪಿನಘಟ್ಟಮ್ಮ ಎಂದು ಕರೆಯಲಾಗುವ ಮೂರ್ತಿ ಶಿಲ್ಪಗಳಿವೆ.‌ ಸಭಾಮಂಟಪದಲ್ಲಿ ತ್ರಿಶೂಲ, ಖಡ್ಗ, ಡಮರುಗ,ಶಿರವಿಡಿದು ನಿಂತ ಭೈರವನ ಶಿಲ್ಪಗಳಿವೆ.
ಮುಖ ಮಂಟಪದಲ್ಲಿ ನಾಗಶಿಲ್ಪಗಳಿವೆ.ಬಂಡೆಯಲ್ಲಿ ಕತ್ತಿ ಮತ್ತು ಬಾಕುಗಳನ್ನು ಹಿಡಿದ ಯೋಧನ ಕೆತ್ತನೆ ಇದೆ.

 

ದೇವಾಲಯದ ಕಣಶಿಲೆಯ ಕಂಬಗಳು ಚಚ್ಚೌಕ ಮತ್ತು ಅಷ್ಟ ಮುಖಗಳಲ್ಲಿ ಇವೆ. ಗುಹಾಲಯದ ಗರ್ಭಗೃಹ ಮತ್ತು ಮೂಲ ಶಿಲ್ಪಗಳು ಪ್ರಾಚೀನವಾಗಿದ್ದರೆ, ಮುಖಮಂಟಪ ಮೊದಲಾದ ಭಾಗಗಳು ಪಾಳೆಗಾರರ ಕಾಲದಲ್ಲಿ ಸೇರ್ಪಡೆ ಆಗಿರುವುದನ್ನು ಕಾಣಬಹುದು. ದೇವಾಲಯದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರದ ದೀಪ ಸ್ತಂಭ ಹಾಗೂ ಉಯ್ಯಾಲೆ ಕಂಬಗಳಿವೆ. ದೇವಾಲಯದ ಮುಖಮಂಟಪದ ಮೇಲೆ ಹಾರದ ರಚನೆಯ ಕೈಪಿಡಿ ಗೋಡೆ ಇದ್ದು ಅದರಲ್ಲಿ ಅನೇಕ ಬಗೆಯ ಗಾರೆಗಚ್ಚಿನ ಮೂರ್ತಿಗಳಿವೆ.

 

ಚಿತ್ರದುರ್ಗದ ಪ್ರಸಿದ್ಧ ದೇವತೆಗಳಲ್ಲಿ ಒಂದಾದ ಏಕನಾಥೇಶ್ವರ ಜಾತ್ರೆಯು ಯುಗಾದಿ ಹಬ್ಬವಾದ 15 ದಿನಗಳ ಬಳಿಕ ಸಾಮಾನ್ಯವಾಗಿ ಶನಿವಾರದಂದು ಜರುಗುತ್ತದೆ.
ಇಡೀ ನಗರದ ತುಂಬೆಲ್ಲ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಪೂಜಿಸಲಾಗುತ್ತದೆ.
ಜಾತ್ರೆಯ ಸಮಯದಲ್ಲಿ ಹತ್ತಾರು ಧಾರ್ಮಿಕ ಆಚರಣೆಗಳ ಜೊತೆಗೆ ಹೂವಿನ ಪೂಜೆ, ಕಾರ್ತಿಕೋತ್ಸವ,ಉಯ್ಯಾಲೆ ಉತ್ಸವ,ದೀಪೋತ್ಸವ… ವಿಜೃಂಭಣೆಯಿಂದ ಸಾವಿರಾರು ಜನರ ನಡುವೆ ಜರುಗುತ್ತದೆ. ಸಿಡಿ ಉತ್ಸವ ಅತ್ಯಂತ ಪ್ರಸಿದ್ಧವಾದ ಆಚರಣೆಯಾಗಿದ್ದು ಈ ದೇವರ ಪಾದಗಟ್ಟೆಯು ಕೋಟೆಯ ಕೆಳಭಾಗದಲ್ಲಿದ್ದು ಅಲ್ಲಿ ನೆರವೇರಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...