ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ರಾಷ್ಟ್ರೀಯ ಖ್ಯಾತ ತರಬೇತುದಾರರಾದ ಮೈಸೂರಿನ ಎಸ್.ಪ್ರಶಾಂತ್ರವರು ಜುಲೈ 19 ಮತ್ತು 20 ರಂದು ನಗರದ ಎಸ್.ಆರ್.ಜಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪಾಧ್ಯಾಯರುಗಳಿಗೆ ಉಚಿತ ಮೆಮೋರಿ ಸೆಮಿನಾರ್ ಅನ್ನು ಏರ್ಪಡಿಸಿದ್ದಾರೆ.
ಪ್ರಪಂಚದಲ್ಲಿ 95% ವಿದ್ಯಾರ್ಥಿಗಳು ಅವರ ಮೆದುಳಿನ ಎಡಭಾಗವನ್ನು ಹೆಚ್ಚು ಬಳಸುತ್ತಾ ಇರುತ್ತಾರೆ. ಆದರೆ 5% ವಿದ್ಯಾರ್ಥಿಗಳು ಮಾತ್ರ ಮೆದುಳಿನ ಬಲ ಭಾಗವನ್ನು ಹೆಚ್ಚು ಹೆಚ್ಚು ಬಳಸಿಕೊಂಡು 90% ಕ್ಕೂ ಅಧಿಕ ಅಂಕ ಗಳಿಸುತ್ತಿರುತ್ತಾರೆ. ಮೆದುಳಿನ ಬಲಭಾಗವನ್ನು ಹೆಚ್ಚು ಬಳಸಿಕೊಂಡಂತೆಲ್ಲಾ ನಮ್ಮ ನೆನಪಿನ ಶಕ್ತಿ ಮತ್ತು ಕ್ರಿಯೇಟಿವಿಟಿ ಜಾಸ್ತಿ ಆಗುತ್ತಾ ಹೋಗುತ್ತದೆ ಎನ್ನುತ್ತಾರೆ ರಾಷ್ಟ್ರೀಯ ಖ್ಯಾತ ತರಬೇತುದಾರರಾದ ಮೈಸೂರಿನ ಎಸ್.ಪ್ರಶಾಂತ್ರವರು. ಮೆದುಳಿನ ಇನ್ನೊಂದು ಭಾಗವನ್ನು ಬಳಸುವುದು ಹೇಗೆ ಮತ್ತು ಹೆಚ್ಚು ಅಂಕ ಗಳಿಸುವುದು ಹೇಗೆ ? ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿಯನ್ನು ಅರಿಯಲು ಮೆಮೋರಿ ಸೆಮಿನಾರ್ನಲ್ಲಿ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 19 ರ ಶನಿವಾರ
1 Seminar: 6:30 p.m to 8.00 p.m.
ಜುಲೈ 20 ರ ಭಾನುವಾರ
2nd Seminar: 11:30 am to 1.00 p.m.
3 Seminar: 4:30 p.m to 6.00 p.m.
4th Seminar: 6:30 p.m to 8.00 p.m.
ಸ್ಥಳ : ಎಸ್.ಆರ್.ಜಿ.ಎಂ.ಎಸ್. ರೋಟರಿ ಬಾಲಭವನ,
ಡಿಸಿ ಆಫೀಸ್ ಸರ್ಕಲ್, ಚಿತ್ರದುರ್ಗ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845668953/9481053450

















