Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೂಮಿ ಬಿಟ್ಟುಕೊಡುವ ರೈತರಿಗೆ ಒಳ್ಳೆಯ ರೇಟ್ ಕೊಡ್ತೇವೆ : ಸಚಿವ ಎಂಬಿ ಪಾಟೀಲ್

---Advertisement---

ಬೆಂಗಳೂರು: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಕೆಐಎಡಿಬಿಯಿಂದ ಭೂಸ್ವಾಧೀನ ವಿರೋಧಿಸಿ ರೈತರು ಹಲವು ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಸ್ವಾಧೀನ ವಿಚಾರದಲ್ಲಿ ರೈತರು ಪರ – ವಿರೋಧ ಇದ್ದಾರೆ. ಇದೆ ವೇಳೆ ಭೂಸ್ವಾಧೀನದ ಪರವಾಗಿರುವ ಮತ್ತೊಂದು ರೈತರ ಗುಂಪು ಜಮೀನು ಕೊಡಲು ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಭೂಸ್ವಾಧೀನ ಸಂಬಂಧ ರೈತರ ನಡುವೆಯೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಈ ಸಂಬಂಧ ಸಚುವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಇದೆ ಮೊದಲೇನು ಅಲ್ಲ ಈ ಹಿಂದೆಯೂ ನೋಟಿಫಿಕೇಷನ್ ಆಗಿದೆ. ಅದು ಅವರು ಒಪ್ಪಿಕೊಂಡ ಮೇಲೆಯೇ ಆಗಿರೋದು. 500 ಎಕರೆ ಇದೆಯಲ್ಲ ಅವರು ಒಪ್ಪಿಕೊಂಡ ಮೇಲೆಯೇ ಹಿಂದೆ ನೋಟಿಫಿಕೇಷನ್ ಆಗಿರೋದು. ಆ ರೈತರು ಕೊಡುವುದಕ್ಕೆ ಬಹುಶಃ ಎಲ್ಲಾ ರೈತರು ರೆಡಿ ಇದ್ದಾರೆ. ಆ ರೈತರ ವಿಷಯ ಬೇರೆ ಈಗ. ಅದನ್ನು ಬಿಟ್ಟು ಹೋರಾಟ ಮಾಡ್ತಾ ಇರುವ ಬೇರೆಯದ್ದೇ ಇದೆ. ನಾಳೆ 15 ತಾರೀಖು ಮೀಟಿಂಗ್ ಇದೆ. ಮೀಟಿಂಗ್ ನಂತರ ಮುಖ್ಯಮಂತ್ರಿಗಳು ಅವರಿಗೆ ಏನು ಹೇಳಬೇಕು ಅದನ್ನ ಹೇಳ್ತಾರೆ.

 

ಅವರ ಹೋರಾಟ ಏನು ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಉಳಿಯಬೇಕು ಎಂಬುದು. ನಾವೂ ಸಹ ಅದಕ್ಕೆ ಒಳ್ಳೆಯ ರೇಟನ್ನೇ ಕೊಡ್ತೇವೆ. ಅನುಕೂಲ ಮಾಡಿ ಕೊಡ್ತೇವೆ. ಇಷ್ಟಾದ ಮೇಲೂ ಅವರು ಕೊಡಲ್ಲ ಅಂದ್ರೆ ಬಳಿಕ ಮುಖ್ಯಮಂತ್ರಿಗಳರೆ ಮಾತಾಡ್ತಾರೆ ಎಂದು ಭೂಸ್ವಾಧೀನದ ಬಗ್ಗೆ ಎಂಬಿ ಪಾಟೀಲ್ ಮಾತನಾಡಿದ್ದಾರೆ. ಒಂದು ಕಡೆ ಭೂಮಿ ಕೊಡಲ್ಲ ಎನ್ನುವ ರೈತರು ಇನ್ನೊಂದು ಕಡೆ ಕೊಡ್ತೀವಿ ಎಂಬ ರೈತರು. ಇದರಿಂದಾನೇ ಅರ್ಧ ಗೊಂದಲ ಮನೆ ಮಾಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment