ಕೆ.ಎನ್.ರಾಜಣ್ಣರ ಕ್ರಾಂತಿ ಹೇಳಿಕೆ : ನಿರ್ಲಕ್ಷ್ಯ ಮಾಡಿ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ಯಾಕೆ..?

1 Min Read

 

ಬೆಂಗಳೂರು: ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನಿನ್ನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದಾರೆ. ಸೆಪ್ಟೆಂಬರ್ ನಲ್ಲಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯೇ ನಡೆಯಲಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಹಲವು ವಿಚಾರಗಳು ಚರ್ಚೆ ಹುಟ್ಟು ಹಾಕಿದ್ದವು. ಆದರೆ ಯಾರಿಗೂ ಯಾವ ರೀತಿಯ ಬದಲಾವಣೆ ಅನ್ನೋದನ್ನ ಮಾತ್ರ ಕ್ಲಾರಿಟಿ ಕೊಟ್ಟಿಲ್ಲ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಹಾಗೂ ಕೆ.ಎನ್. ರಾಜಣ್ಣ ಆಪ್ತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ರಾಜಣ್ಣ ಅವರ ಹೇಳಿಕೆಯನ್ನ ನಿರ್ಲಕ್ಷ್ಯ ಮಾಡುವುದು ಉತ್ತಮ ಎನ್ನುತ್ತಿದ್ದಾರೆ. ಇಂದು ಕೆಂಪೇಗೌಡರ ಜಯಂತಿ ಆಚರಣೆಯ ಬಳಿಕ ಈ ಸಂಬಂಧ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು ಎಂದಿದ್ದಾರೆ.

ರಾಜಣ್ಣ ಬದಲಾವಣೆಯಾಗಬಹುದು ಅಂತ ಹೇಳಿದ್ದಾರೆ ಅಷ್ಟೇ. ಹೀಗೆ ಆಗುತ್ತೆ ಅಂತ ಹೇಳಿಲ್ಲ ಅಲ್ವಾ. ನೀವೂ ಊಹೆ ಮಾಡ್ಕೊಂಡು ಹಿಂಗಿಂಗೆ ಆಗುತ್ತೆ ಅಂತ ಬರೆದ್ರೆ ಏನ್ ಮಾಡೋದಕ್ಕೆ ಆಗುತ್ತೆ. ಬೆಟರ್ ಅಂದ್ರೆ ಆ ಹೇಳಿಕೆಯನ್ನ ನಿರ್ಲಕ್ಷ್ಯ ಮಾಡಿ. ನಾನು ಜರ್ನಲಿಸ್ಟ್ ಅಲ್ಲ ಎಂದು ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆಗಸ್ಟ್ – ಸೆಪ್ಟೆಂಬರ್ ನಲ್ಲಿ ಭಾರೀ ಬದಲಾವಣೆಯಾಗಲಿದೆ. ಆಶ್ಚರ್ಯಕರ ಬದಲಾವಣೆಯಾಗಲಿದೆ. ಈಗ ತಣ್ಣಗೆ ಗಾಳಿ ಬೀಸುತ್ತಾ ಇದೆ. ಸೆಪ್ಟೆಂಬರ್ ಕಳಿಲಿ ನೋಡಿವ್ರಂತೆ. ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿದೆ. ಮೊದಲು 13-18 ಅಷ್ಟೇ ಒವರ್ ಸೆಂಟರ್ ಇದ್ದವು. ಈಗ ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ. ಪವರ್ ಸೆಂಟರ್ ಗಳು ಜಾಸ್ತಿಯಿದ್ದಾಗ ಜಂಜಾಟಗಳು ಜಾಸ್ತಿಯಾಗುತ್ತವೆ. ಆ ಹಿನ್ನೆಲೆಯಲ್ಲಿ ಆ ಪರಿಸ್ಥಿತಿಗೆ ಅನುಗುಣವಾಗಿ ಅವರು ಸರ್ಕಾರವನ್ನು, ಪಕ್ಷವನ್ನು ನಡೆಸಬೇಕಾಗುತ್ತದೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks