ಕೊರೊನಾಗೆ ಬೆಂಗಳೂರಿನಲ್ಲಿ ಮೊದಲ ಬಲಿ : ಜಾಗೃತಿಯಿಂದಿರಲು ಸೂಚನೆ..!

ಬೆಂಗಳೂರು; ಕೊರೊನಾ ಕೇಸ್ ಗಳು ಈಗಾಗಲೇ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿವೆ ಅನ್ನೋದು ಎಲ್ಲರಿಗೂ ಗೊತ್ತು. ಸರ್ಕಾರವೂ ಕೂಡ ಈ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಎಚ್ಚರದಿಂದ ಇರಲು ಸೂಚನೆ ನೀಡಿದೆ. ಭಯ ಪಡೋದು ಬೇಡ, ಆದರೆ ಜಾಗೃತಿ ಬಹಳ ಮುಖ್ಯವಾದದ್ದು. ಯಾಕಂದ್ರೆ ಮಳೆಗಾಲಕ್ಕೆ, ಚಳಿಗಾಲಕ್ಕೆ ಈ ವೈರಸ್ ಗಳು ಆಕ್ಟಿವ್ ಆಗುತ್ತವೆ, ಹೆಚ್ಚಾಗುತ್ತವೆ. ಇದೀಗ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಂದಾಗಿ ಒಬ್ಬರು ಬಲಿಯಾಗಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಸಾವನ್ನಪ್ಪಿರುವುದು ದಾಖಲಾಗಿದೆ. 84 ವರ್ಷದ ವ್ಯಕ್ತಿ ಒಬ್ಬರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಇನ್ನಷ್ಟು ಆತಂಕವನ್ನು ಸೃಷ್ಟಿ ಮಾಡಿದೆ.

ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ 38 ಇದೆ. ಅದರಲ್ಲಿ ಬೆಂಗಳೂರು ಒಂದರಲ್ಲಿಯೇ 32 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಬೇರೆ ಜಿಲ್ಲೆಯಲ್ಲಿ ಅಂದ್ರೆ ಮೈಸೂರಲ್ಲಿ 2 ಹಾಗೂ ವಿಜಯನಗರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಜನರನ್ನು ಭೇಟಿ ಮಾಡುವಾಗ ಸಿಎಂ ಸಿದ್ದರಾಮಯ್ಯ ಅವರು ಮಾಸ್ಕ್ ಧರಿಸಿ ಬರುವ ಮೂಲಕ ಎಚ್ಚರಿಸಿದ್ದಾರೆ.

ವೈರಸ್ ಹೆಚ್ಚಾಗುವ ಮೊದಲೇ ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಸರ್ಕಾರ ಕೂಡ ಈಗಾಗಲೇ ಮುಂಜಾಗ್ರತ ಕ್ತಮಗಳತ್ತ ಗಮನ ಹರಿಸಿದೆ. ಆದರೆ ಜನರ ಜವಾಬ್ದಾರಿ ಬಹಳ ಮುಖ್ಯವಾಗುತ್ತದೆ. ಅಂದ್ರೆ ಎಷ್ಡು ಜಾಗೃತಿ ವಹಿಸುತ್ತಾರೋ ಅಷ್ಟು ಮುಖ್ಯವಾಗುತ್ತದೆ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಅದಕ್ಕಿಂತ ಹೆಚ್ಚಾಗಿ ಬಿಸಿ ನೀರನ್ನ ಕುಡಿಯಿರಿ. ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡಿಕೊಳ್ಳುವ ಆಹಾರ ತಿನ್ನಿ ಇದರಿಂದ ರೋಗದಿಂದ ಬಚಾವ್ ಆಗಬಹುದು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks