ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 22 : ದಿನನಿತ್ಯವು ನಗರ ಸ್ವಚ್ಚತೆಯಲ್ಲಿ ತೊಡಗುವ ನೀವುಗಳು ಶುದ್ದವಾದ ನೀರನ್ನೆ ಕುಡಿಯಿರಿ ಎಂದು ನಗರಸಭೆ ಅಧ್ಯಕ್ಷೆ ಸುಮಿತ ಪೌರ ನೌಕರರಿಗೆ ತಿಳಿಸಿದರು.
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಪೌರ ಕಾರ್ಮಿಕರಿಗೆ ಕಾಪರ್ ಬಾಟಲ್ಗಳನ್ನು ವಿತರಿಸಿ ಮಾತನಾಡಿದರು. ಬೆಳಿಗ್ಗೆ ನೀವುಗಳು ಮನೆಯಿಂದ ಹೊರಡುವಾಗ ಕಾಪರ್ ಬಾಟಲ್ಗಳಲ್ಲಿ ಬಿಸಿನೀರು ಇಲ್ಲವೆ ತಣ್ಣೀರನ್ನು ತುಂಬಿಸಿಕೊಂಡು ಬನ್ನಿ. ಉಪಹಾರದ ನಂತರ ಪ್ಲಾಸ್ಟಿಕ್ ಬಾಟಲ್ಗಳಲ್ಲಿನ ನೀರು ಕುಡಿಯುವ ಬದಲು ಕಾಪರ್ ಬಾಟಲ್ನಲ್ಲಿನ ನೀರು ಕುಡಿದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಇದರಿಂದ ಕಿಡ್ನಿ ಇನ್ನಿತರೆ ಪ್ರಮುಖ ಅಂಗಾಂಗಳಿಗೆ ತೊಂದರೆಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಟಲ್ಗಳನ್ನು ಮನೆಯಲ್ಲಿಟ್ಟು ಬರಬೇಡಿ ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿ ಪೌರ ನೌಕರರ ಆರೋಗ್ಯದ ದೃಷ್ಟಿಯಿಂದ ಕಾಪರ್ ನೀರಿನ ಬಾಟಲ್ಗಳನ್ನು ಖರೀಧಿಸಿ ನೀಡಲಾಗುತ್ತಿದೆ. ಪ್ರತಿನಿತ್ಯವೂ ಈ ಬಾಟಲಿಯಲ್ಲಿನ ನೀರು ಸೇವಿಸಿ ಎಲ್ಲೆಂದರಲ್ಲಿ ಸಿಕ್ಕ ನೀರನ್ನು ಕುಡಿದು ಆರೋಗ್ಯ ಹದಗೆಡಿಸಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಹೆಲ್ತ್ ಇನ್ಸ್ಪೆಕ್ಟರ್ಗಳಾದ ನಿರ್ಮಲ, ಹೀನಾಕೌಸರ್, ರುಕ್ಮಿಣಿ, ಭಾರತಿ, ಬಾಬುರೆಡ್ಡಿ ಇವರುಗಳು ಈ ಸಂದರ್ಭದಲ್ಲಿದ್ದರು.












