ಚಿತ್ರದುರ್ಗ :ಕ್ಷಣಾರ್ಧದಲ್ಲೇ 5ಲಕ್ಷ ಹಣ ದೋಚಿದ ಕಳ್ಳರು

1 Min Read

ಸುದ್ದಿಒನ್, ಚಿತ್ರದುರ್ಗ, ಮೇ. 10 : ಜಿಲ್ಲೆಯ ಹಿರಿಯೂರು ನಗರದ ಸುಗ್ಗಿ ಸಂಕೀರ್ಣದಲ್ಲಿರುವ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ಎಕ್ಸ್ ಎಲ್ ಬೈಕ್ ನಲ್ಲಿದ್ದ 5 ಲಕ್ಷ ಹಣವನ್ನು ಕಳ್ಳರು ಕ್ಷಣಾರ್ಧದಲ್ಲೇ ದೋಚಿ ಪರಾರಿಯಾದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.

ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಕುಮಾರ್ ಎನ್ನುವವರು ಹಿರಿಯೂರಿನ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ನಲ್ಲಿ ಜಮೀನು ಮಾರಿದ ಹಣವಿಟ್ಟಿದ್ದರು. ಹೊಸಹಳ್ಳಿಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದು ಮನೆ ನಿರ್ಮಾಣದ ಖರ್ಚಿಗೆಂದು ಶನಿವಾರ ನಗರಕ್ಕೆ ಬಂದು 5 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದು ಬೈಕ್ ನ ಹ್ಯಾಂಡಲ್ ಗೆ ದುಡ್ಡಿನ ಕವರ್ ನೇತುಹಾಕಿ ಅಡ್ಡ ನಿಲ್ಲಿಸಿದ್ದ ಬೈಕ್ ಸರಿಸಲು ಹೋಗಿದ್ದಾರೆ. ಅಡ್ಡ ಇದ್ದ ಬೈಕ್ ಸರಿಸಿ ತನ್ನ ಬೈಕ್ ನ ಬಳಿ ಬಂದರೆ ಹಣದ ಕವರ್ ನಾಪತ್ತೆಯಾಗಿತ್ತು. ಯಾರೋ ಇಬ್ಬರು ಕಳ್ಳರು ಕೈ ಸನ್ನೆ ಮಾಡಿ ನನ್ನನ್ನು ಬೈಕ್ ಸರಿಸಲು ಹೇಳಿ ಹಣ ಎಗರಿಸಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *