Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ :ಕ್ಷಣಾರ್ಧದಲ್ಲೇ 5ಲಕ್ಷ ಹಣ ದೋಚಿದ ಕಳ್ಳರು

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 10 : ಜಿಲ್ಲೆಯ ಹಿರಿಯೂರು ನಗರದ ಸುಗ್ಗಿ ಸಂಕೀರ್ಣದಲ್ಲಿರುವ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ಎಕ್ಸ್ ಎಲ್ ಬೈಕ್ ನಲ್ಲಿದ್ದ 5 ಲಕ್ಷ ಹಣವನ್ನು ಕಳ್ಳರು ಕ್ಷಣಾರ್ಧದಲ್ಲೇ ದೋಚಿ ಪರಾರಿಯಾದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.

ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಕುಮಾರ್ ಎನ್ನುವವರು ಹಿರಿಯೂರಿನ ಕೊಟ್ಯಾಕ್ ಮಹಿಂದ್ರಾ ಬ್ಯಾoಕ್ ನಲ್ಲಿ ಜಮೀನು ಮಾರಿದ ಹಣವಿಟ್ಟಿದ್ದರು. ಹೊಸಹಳ್ಳಿಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದು ಮನೆ ನಿರ್ಮಾಣದ ಖರ್ಚಿಗೆಂದು ಶನಿವಾರ ನಗರಕ್ಕೆ ಬಂದು 5 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದು ಬೈಕ್ ನ ಹ್ಯಾಂಡಲ್ ಗೆ ದುಡ್ಡಿನ ಕವರ್ ನೇತುಹಾಕಿ ಅಡ್ಡ ನಿಲ್ಲಿಸಿದ್ದ ಬೈಕ್ ಸರಿಸಲು ಹೋಗಿದ್ದಾರೆ. ಅಡ್ಡ ಇದ್ದ ಬೈಕ್ ಸರಿಸಿ ತನ್ನ ಬೈಕ್ ನ ಬಳಿ ಬಂದರೆ ಹಣದ ಕವರ್ ನಾಪತ್ತೆಯಾಗಿತ್ತು. ಯಾರೋ ಇಬ್ಬರು ಕಳ್ಳರು ಕೈ ಸನ್ನೆ ಮಾಡಿ ನನ್ನನ್ನು ಬೈಕ್ ಸರಿಸಲು ಹೇಳಿ ಹಣ ಎಗರಿಸಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment