ಆರ್ಯವೈಶ್ಯ ಸಂಘ (ರಿ)
ವಾಸವಿ ಮಹಲ್ ರಸ್ತೆ, ಚಿತ್ರದುರ್ಗ
ಪ್ರಕಟಣೆ ಕೃಪೆಗಾಗಿ
ದಿನಾಂಕ : 07/05/2025
ಸುದ್ದಿಒನ್, ಚಿತ್ರದುರ್ಗ, ಮೇ. 07 : “ದೇಶದ ಸಮಗ್ರ ಏಕತೆಗಾಗಿ ಆರ್ಯವೈಶ್ಯ ಸಮಾಜ ಸದಾ ಸಿದ್ದ” ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬು ಹೇಳಿದರು.
ನಗರದ ವಾಸವಿ ಮಹಲ್ ನಲ್ಲಿ ವಾಸವಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಡಿನ ಸಮಸ್ತ ಜನತೆಗೆ ವಾಸವಿ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ, ನಾವು ರಾಷ್ಟ್ರದ ಜೊತೆ ಸದಾ ಇದ್ದೇವೆ. ಸಂಕಷ್ಟಗಳ ಸಂದರ್ಭದಲ್ಲಿ ನಾವೆಲ್ಲಾ ಒಂದುಗೂಡಿ ಸೇವೆ ಸಲ್ಲಿಸಲು ಸಿದ್ದ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು, ಆರ್ಯವೈಶ್ಯ ಸಮುದಾಯದವರು ಉಪಸ್ಥಿತರಿದ್ದರು.


