ಸುದ್ದಿಒನ್, ಚಿತ್ರದುರ್ಗ ಏ.14 : ರಾಷ್ಟ್ರೀಯ ಸೇವಾ ಯೋಜನೆ, ದಾವಣಗೆರೆ ವಿಶ್ವವಿದ್ಯಾಲಯ, ಐಕ್ಯೂಎಸಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿತ್ರದುರ್ಗ ಇವರ ಸಹಯೋಗದಲ್ಲಿ ಲಕ್ಷ್ಮೀಸಾಗರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕ-1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರ-2025ರ ಮೂರನೇ ದಿನದ ಕಾರ್ಯಕ್ರಮದಲ್ಲಿ ಬಸವೇಶ್ವರ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಬಸವೇಶ್ವರ ಆಸ್ಪತ್ರೆಯ ವೈದ್ಯರಾದ ಜನರಲ್ ಮೆಡಿಸಿನ್ನ ಡಾ|| ವಿಶಾಖ್, ಜನರಲ್ ಸರ್ಜರಿ – ಡಾ|| ಹರೀಶ್, ಆರ್ಥೋ-ಡಾ|| ತೇಜಸ್, ಕಣ್ಣಿನ ವಿಭಾಗದಿಂದ ಡಾ|| ನಿಹಾರಿಕಾ, ಮಕ್ಕಳ ತಜ್ಞರಾದ ಡಾ|| ಯಶಸ್ವಿನಿ, ಚರ್ಮರೋಗ ವಿಭಾಗದ ಡಾ|| ಅಭಿನವ್, ಪ್ರಸಾದ್, ವಿಕಾಸ್, ಯಶೋದ ಮೊದಲಾದವರು ರೋಗಿಗಳ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ನೀಡಿದರು. ಗ್ರಾಮಸ್ಥರು ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಶಿಬಿರಾರ್ಥಿಗಳು ಗ್ರಾಮದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಭಾನುವಾರ ನಡೆದ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಪರಮೇಶ್ವರಪ್ಪ ಕುದರಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ಮುಖಂಡರಾದ ಚೌಡಪ್ಪ, ಗುತ್ತಿಗೆದಾರರಾದ ನಾಗರಾಜ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಸಿ.ಟಿ.ಜಯಣ್ಣ, ಕೆ.ಹೆಚ್. ಶಿವಕುಮಾರ್, ಉಪನ್ಯಾಸಕರಾದ ಡಾ. ಬಿ.ವೆ. ಶ್ವೇತ, ಮಧು, ವಿಶ್ವನಾಥ್, ಶ್ರೀಮತಿ ರೂಪ, ಎಲ್.ರುಚಿತ, ಉಷಾ, ನಯನ ಕಾರ್ಯಕ್ರಮದಲ್ಲಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.















