Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸುನಿತಾ ವಿಲಿಯಮ್ಸ್ ಅವರ ಆತ್ಮಸ್ಥೈರ್ಯ, ತಾಳ್ಮೆ ಯುವಪೀಳಿಗೆಗೆ ಮಾದರಿ : ಡಾ.ಕೆ.ಸೌಮ್ಯಾ ಮಂಜುನಾಥ್

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ ಆತ್ಮಸ್ಥೈರ್ಯ, ಛಲ, ಸಂಕಷ್ಟವನ್ನು ತಾಳ್ಮೆಯಿಂದ ಗೆದ್ದ ರೀತಿ ಈಗಿನ ಯುವಪೀಳಿಗೆಗೆ ಮಾದರಿ ಆಗಬೇಕು ಎಂದು ಜೀವರಕ್ಷಕ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸೌಮ್ಯಾ ಮಂಜುನಾಥ್ ತಿಳಿಸಿದ್ದಾರೆ.

ಬುಧವಾರ ಪತ್ರಿಕೆ ಹೇಳಿಕೆ ನೀಡಿರುವ ಅವರು, ಎಂಟು ದಿನಕ್ಕೆ ಸೀಮಿತವಾಗಿ ಮಾನಸಿಕವಾಗಿ ಸಿದ್ಧಗೊಂಡು ಬಾಹ್ಯಾಕಾಶಕ್ಕೆ ತೆರಳಿದ್ದ ಇವರು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ಒಂಬತ್ತು ತಿಂಗಳ ಕಾಲ ಅಲ್ಲಿಯೇ ಊಟ, ನೀರು, ನಿದ್ರೆ, ದಿನನಿತ್ಯದ ಕಾರ್ಯಗಳಲ್ಲಿ ಏರುಪೇರು ಆಗಿದ್ದರೂ ಒಂಬತ್ತು ತಿಂಗಳ ಕಾಲ ಇದ್ದಿದ್ದೂ ನಿಜಕ್ಕೂ ಸ್ಮರಣೀಯ. ಭೂಮಿ ಮೇಲೆ ವಾಸವಿರುವ ನಾವು ಒಂದು ಕ್ಷಣ ಬಾಯಾರಿಕೆ, ಊಟ, ನಿದ್ರೆ, ಆಸೆಪಟ್ಟ ವಸ್ತುಗಳು ಸಿಗದಿದ್ದ ವೇಳೆ ಸಿಟ್ಟಿನಿಂದ ವರ್ತಿಸುವ ನಮಗೆ ಬಾಹ್ಯಾಕಾಶದಲ್ಲಿ ಇಬ್ಬರೇ ತಮ್ಮ ಆತ್ಮಸ್ಥೈರ್ಯದಿಂದ ಜೀವಂತ ಬದುಕಿ, ಭೂಮಿಗೆ ಹಿಂತಿರುಗಿರುವುದು ವಿಜ್ಞಾನ ಜಗತ್ತಿನಲ್ಲಿಯೇ ಸ್ಮರಣೀಯವಾಗಿ ಉಳಿಯಲಿದೆ. ಜೊತೆಗೆ ನಮಗೆ ಪಾಠವಾಗಬೇಕಿದೆ ಎಂದು ಹೇಳಿದ್ದಾರೆ.

ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜೀವಂತ ಬರಲು ಯಾವುದೇ ಪವಾಡಗಳು ಕೆಲಸ ಮಾಡಿಲ್ಲ. ಒಂದು ವಿಜ್ಞಾನ ಮತ್ತೊಂದು ಆತ್ಮಸ್ಥೈರ್ಯ. ಆದ್ದರಿಂದ ಈಗಿನ ಯುವಪೀಳಿಗೆ ಎಂತಹ ಸಂಕಷ್ಟದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.

ವಿಜ್ಞಾನ ಮತ್ತು ಆತ್ಮಸ್ಥೈರ್ಯದತ್ತ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಮೌಢ್ಯ, ಕಂದಾಚಾರಗಳಿಂದ ದೂರ ಇರಬೇಕು. ಪವಾಡಗಳನ್ನು ಮಾಡುತ್ತೇವೆ ಎಂದು ಹೇಳಿ ವಂಚಿಸುವ ವ್ಯಕ್ತಿಗಳಿಗೆ ಮಾರು ಹೋಗಬಾರದು. ಈ ಜಗತ್ತು ವಿಸ್ಮಯವಾಗಿದ್ದು, ಅದರ ಅಧ್ಯಯನದಲ್ಲಿ ತೊಡಗಿರುವ ವಿಜ್ಞಾನಿಗಳು, ಅವರ ಶ್ರಮ, ಬದ್ಧತೆ, ಧೈರ್ಯ ನಮಗೆ ಮಾದರಿ ಆಗಬೇಕು. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿರುವುದಕ್ಕೆ ಇಂತಹ ವಿಜ್ಞಾನಿಗಳು ತ್ಯಾಗದ ಮೂಲಕ ನೀಡಿದ ಕೊಡುಗೆಗಳೇ ಕಾರಣ.

ಆದ್ದರಿಂದ ನಾವೆಲ್ಲರೂ ಅವರನ್ನು ಗೌರವಿಸುವ ಜೊತೆಗೆ ವಿಜ್ಞಾನದ ಕೌತುಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಚಂದ್ರ-ಸೂರ್ಯಗ್ರಹಣ ಸೇರಿ ವಿವಿಧ ಸಂದರ್ಭದಲ್ಲಿ ಮೌಢ್ಯದಿಂದ ಹೊರಬಂದು ವಿಜ್ಞಾನದ ಕಣ್ಣುಗಳಲ್ಲಿ ವೀಕ್ಷಿಸಿ, ಚಿಂತಿಸುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು ಎಂದು ಡೌ.ಸೌಮ್ಯಾ ಮಂಜುನಾಥ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...