Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಷ್ಟ್ರೀಯ ಯುವ ದಿನ ಅಂಗವಾಗಿ ಅಯೋಡಿನ್ ಕೊರತೆ ಅಸ್ಪಷ್ಟತೆ ಬಗ್ಗೆ ಜಾಗೃತಿ ಅಧಿವೇಶನ

---Advertisement---

 

ಗುಬ್ಬಿ: ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಅಂಗವಾಗಿ ನಿಟ್ಟೂರು ಹೋಬಳಿ ಕುಂದರನಹಳ್ಳಿ ಗೇಟ್ ಬಳಿಯ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಅಯೋಡಿನ್ ಕೊರತೆ ಅಸ್ಪಷ್ಟತೆ ಕುರಿತು ಅಧಿವೇಶನ ಆಯೋಜಿಸಲಾಗಿತ್ತು.

ಬೆಂಗಳೂರಿನ ಐಜಿಡಿ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಅಯೋಡಿನ್ ಕೊರತೆ ಅಸ್ಪಷ್ಟತೆ ಅಧಿವೇಶನದಲ್ಲಿ ನೂರಾರು ಮಕ್ಕಳು ಆರೋಗ್ಯ ಜಾಗೃತಿ ಬಗ್ಗೆ ಸಾಕ್ಷಷ್ಟು ಮಾಹಿತಿ ಹಾಗೂ ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯಲಾಯಿತು.

ಐಜಿಡಿ ಸಂಸ್ಥೆಯ ಡಾ.ಸುಷ್ಮಾ ಮಾತನಾಡಿ ಮಾನಸಿಕ ಆರೋಗ್ಯಕ್ಕೆ ಸಮಸ್ಯೆ ನೀಡುವ ಅಯೋಡಿನ್ ಕೊರತೆ ಮನುಷ್ಯನಲ್ಲಿ ನಾನಾ ರೋಗಗಳಿಗೆ ಮೂಲವಾಗಿದೆ. ಅಸ್ಪಷ್ಟತೆ ಬಗ್ಗೆ ಡಾಕ್ಟರ್ ಸಲಹೆ ಅತ್ಯಗತ್ಯ. ಮೈಕ್ರೋ ನ್ಯೂಟ್ರಿನ್ ಅವಶ್ಯಕತೆ ಬಗ್ಗೆ ಸಹ ಮಕ್ಕಳು ತಿಳಿಯಬೇಕು ಎಂದ ಅವರು ಉಪ್ಪಿನ ದ್ರಾವಣ ಅಂಶ ಸೇವನೆ ಕಡಿಮೆಯಾಗದಂತೆ ಗಮನಹರಿಸಬೇಕು. ಕೆಲ ಪ್ರದೇಶದಲ್ಲಿ ಮಣ್ಣಿನಲ್ಲಿ ಅಯೋಡಿನ್ ಕಡಿಮೆ ಇದ್ದು ಅಲ್ಲಿನ ಬೆಳೆಗಳ ತಿನ್ನುವರಲ್ಲಿ ಅಯೋಡಿನ್ ಕೊರತೆ ಕಾಣುತ್ತದೆ. ಸಮುದ್ರಾಹಾರ ಸೇವನೆ ಮಾಡುವುದು ಉತ್ತಮ ಎಂದರು.

ಶಿಕ್ಷಕಿ ಪೂರ್ಣಿಮಾ ಮಾತನಾಡಿ ಸ್ವಾಮಿ ವಿವೇಕಾನಂದರ ಜಯಂತಿ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಆಚರಿಸುವ ಹಿನ್ನಲೆ ಮುಂದಿನ ಪೀಳಿಗೆಗೆ ಆರೋಗ್ಯ ಕಾಳಜಿ ಬಗ್ಗೆ ತಿಳಿಸಬೇಕಿದೆ. ವೀರ ಸನ್ಯಾಸಿ ಎಂದೇ ವಿಶ್ವ ಖ್ಯಾತಿ ಪಡೆದ ವಿವೇಕಾನಂದರ ವಾಣಿ ಎಂದಿಗೂ ಯುವ ಜಾಗೃತಿ ಮೂಡಿಸುತ್ತದೆ. ಅಧ್ಯಾತ್ಮಿಕ ಚಿಂತಕರಾಗಿ ಪ್ರಭಾವಿಗಳಾಗಿ ವಿಶ್ವವೇ ನಿಬ್ಬೆರಗಾಗುವ ಮಾತುಗಳು ವಿಶ್ವ ಸಮ್ಮೇಳನದಲ್ಲಿ ಆಡಿದ್ದರು. ಅವರ ಪ್ರಕಾರ ಆರೋಗ್ಯವಂತ ಯುವಕರು ಆರೋಗ್ಯ ಸಮಾಜಕ್ಕೆ ಮಾರ್ಗಸೂಚಿ ಎಂದರು.

ಐಜಿಡಿ ಸಂಸ್ಥೆಯ ಕ್ಷೇತ್ರ ಮಾರ್ಗದರ್ಶಕ ಶಿವರಾಜ್ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಆರೋಗ್ಯ ಅರಿವು ಅತೀ ಮುಖ್ಯವಾಗಿದೆ. ದೈಹಿಕ ಸ್ವಾಸ್ಥ್ಯ ಕುರಿತು ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯುವುದು ಅವಶ್ಯವಿದೆ. ವಿವೇಕಾನಂದ ಜಯಂತಿ ದಿನವೇ ಯುವ ಜನಾಂಗಕ್ಕೆ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಸಂಸ್ಥೆ ನಿರಂತರ ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಟರಾಜು, ಶಿಕ್ಷಕರಾದ ಎಸ್.ಡಿ.ಕುಮಾರ್, ತನುಜ್ ಕುಮಾರ್, ಐಜಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಾಜಶ್ರೀ, ಎಚ್ ಆರ್ ನವೀನ್ ಕುಮಾರ್ ಇತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)

Leave a Comment