Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜ : ಸದಸ್ಯರು ಹಾಗೂ ಪದಾಧಿಕಾರಿಗಳ ಆಯ್ಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 26 : ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜಕ್ಕೆ 2025-26 ರಿಂದ 2029-30 ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಹೆಚ್. ಕೆ. ರಾಮಕೃಷ್ಣ ತಿಳಿಸಿದ್ದಾರೆ.

 

2025-26 ರಿಂದ 2029-30 ನೇ ಸಾಲಿನ 5 ವರ್ಷಗಳ ಅವಧಿಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ಡಿ.15 ರಂದು ನೆಡೆಸಿದ್ದು, ಈ ಚುನಾವಣೆಯಲ್ಲಿ 14 ಸದಸ್ಯರುಗಳಾದ

 

1. ಸತೀಶ್ ಬಿನ್ ಹೆಚ್.ಮುರಿಗೇಂದ್ರಪ್ಪ,
2. ಶ್ರೀಮತಿ ಪಾರ್ವತಮ್ಮ ಕೋಂ ಲೇಟ್ ಅಜ್ಜಪ್ಪ,
3. ಬಿ.ಟಿ.ಜಗದೀಶ್ ಬಿನ್ ಲೇಟ್ ಬಿ.ಆರ್.ತಿಪ್ಪೇಸ್ವಾಮಿ,
4. ಎಸ್.ಎಲ್.ನಾಗರಾಜು ಬಿನ್ ಲಿಂಗಪ್ಪ,
5. ಸಿ.ಯೋಗರಾಜ ಬಿನ್ ಚಂದ್ರಪ್ಪ,
6. .ಎಂ.ಮಹೇಶ್ವರಪ್ಪ ಬಿನ್ ಲೇಟ್ ಮಹಾಲಿಂಗಪ್ಪ,
7. ಗಂಗಾಧರ ಬಿನ್ ಗೋವಿಂದಪ್ಪ,
8. ಕೆ.ಪ್ರಾಣೇಶ್ ಬಿನ್ ಕರಿಯಲ್ಲಪ್ಪ,
9. ಆರ್.ಶಶಿಧರ್ ಬಿನ್ ಆರ್.ಆರ್.ರಾಮಕೃಷ್ಣಯ್ಯ,
10. ಶ್ರೀಮತಿ ಮಂಜುಳಮ್ಮ ಕೋಂ ಲೇ.ಲಕ್ಷ್ಮಣಪ್ಪ,
11. ಎಂ.ಪರಮೇಶ್ ಬಿನ್ ಲೇ. ಮುರಿಗೆಪ್ಪ,
12. ಎನ್.ಪರಶುರಾಮ್ ಬಿನ್ ಜಿ.ನಿಂಗಪ್ಪ,
13. ಎನ್.ಹನುಮಂತರೆಡ್ಡಿ ಬಿನ್ ಎನ್.ಸಿಂಪ್ರಯ್ಯ,
14. ಶಂಭುಲಿಂಗಪ್ಪ ಸಿ ಬಿನ್ ಗೌಡ್ರು ಎಂ.ಚನ್ನಬಸಪ್ಪ ರವರುಗಳು
ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಡಿ.26ರ ಇಂದು ಬೆಳಿಗ್ಗೆ ತಾಲ್ಲೂಕು ಕೃಷಿಕ ಸಮಾಜಕ್ಕೆ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನು, ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಏರ್ಪಡಿಸಿದ್ದು ಈ ಸಭೆಯನ್ನು ಹಂಗಾಮಿ ಅಧ್ಯಕ್ಷರಾಗಿ ಹನುಮಂತರೆಡ್ಡಿ ಇವರು ವಹಿಸಿದ್ದು, ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಉಪಾಧ್ಯಕ್ಷರಾಗಿ ಎಂ.ಸತೀಶ್ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪ್ರಾಣೇಶ್ ಖಜಾಂಜಿಯಾಗಿ ಪಟೇಲ್ ಸಿ.ಶಂಭುಲಿಂಗಪ್ಪ ಜಿಲ್ಲಾ ಪ್ರತಿನಿಧಿಯಾಗಿ ಆರ್.ಶಶಿಧರ್ ಬಿನ್ ಆರ್.ಆರ್. ರಾಮಕೃಷ್ಣಯ್ಯ ಇವರುಗಳನ್ನು 2025-26 ರಿಂದ 2029-30 ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...