Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಗ್ಗರಣೆಗೆ ಮಾತ್ರ ಅಲ್ಲ ಸಾಸಿವೆಯಿಂದ ಅನೇಕ ಕಾಯಿಲೆಗಳು ದೂರಾಗ್ತವೆ..!

Facebook
Twitter
Telegram
WhatsApp

ಸಾಸಿವೆ ಕಾಳು ಯಾರ ಮನೆಯಲ್ಲಿಲ್ಲ ಹೇಳಿ. ಸಾಸಿವೆ ಇಲ್ಲದ ಅಡುಗೆ ಮನೆ ಇರಲು ಸಾಧ್ಯವೆ ಇಲ್ಲ. ಹಾಗೇ ಸಾಸಿವೆಯಿಲ್ಲದೆ ಒಗ್ಗರಣೆಯೇ ಮುಗಿಯಲ್ಲ. ಹಾಗಂತ ಸಾಸಿವೆ ಕೇವಲ ಒಗ್ಗರಣೆಗೆ ಅಂದ್ಕೊಳ್ಳಬೇಡಿ. ಅದು ನಾನಾ ಕಾಯಿಲೆಗಳನ್ನು ಗಿಣ ಮಾಡೋ ಶಕ್ತಿ ಹೊಂದಿದೆ.

ಸಾಸಿವೆ ಹೆಚ್ಚಿನ ಪ್ರಮಾಣದಲ್ಲಿ ಖನಿಜ ಪದಾರ್ಥ ಗಳನ್ನು ಹೊಂದಿದ್ದು ಅದರಲ್ಲಿ ಕ್ಯಾಲ್ಸಿಯಂ ಪಾಸ್ಫರಸ್ ಪೊಟಾಸಿಯಂ ಮುಖ್ಯವಾದದ್ದು. ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಮೆಗ್ನೀಷಿಯಂ ಜೊತೆಗೆ ನೀರಿನಲ್ಲಿ ಕರಗುವ ನಾರಿನಂಶ ಇದರಲ್ಲಿದೆ.

ಸಾಸಿವೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತೆ.

ಸೋರಿಯಾಸಿಸ್ ಇರುವವರು ಸಾಸಿವೆಯ ಬಳಕೆಯನ್ನು ಹೆಚ್ಚಿಸುವುದು ಒಳ್ಳೆಯದು. ಪೇಸ್ಟ್ ಮಾಡಿ ಅರಿಶಿನದೊಂದಿಗೆ ಬೆರೆಸಿ ಚರ್ಮದ ಮೇಲೆ ನಿಯತವಾಗಿ ಲೇಪಿಸಿಕೊಳ್ಳುವುದರಿಂದ ಕಲೆಗಳನ್ನು ಸ್ವಲ್ಪ ಮಟ್ಟಿಗೆ ಹತೋಟಿ ಮಾಡಲು ಸಾಧ್ಯ.

ಶ್ವಾಸಕೋಶ ಸಂಬಂಧಿತ ತೊಂದರೆಗಳಿಗೆ ಹತೋಟಿಗೆ ಸಾಸಿವೆಯು ಸಹಾಯ ಮಾಡುತ್ತದೆ. ಶೀತ, ಕೆಮ್ಮು, ನೆಗಡಿ ಸೈನಸ್ ತೊಂದರೆಗಳಿಗೆ ಚಿಕಿತ್ಸಕವಾಗಿ ಕೆಲಸ ಮಾಡಬಲ್ಲದು.

ಅಸ್ತಮಾ ಬ್ರಾಂಕ್ರೈಟಿಸ್ ಸಮಸ್ಯೆ ಇರುವಾಗ ಸಾಸಿವೆಯ ಎಣ್ಣೆಗೆ ಕರ್ಪೂರವನ್ನು ಸೇರಿಸಿ ಎದೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿದಾಗ ಸುಲಭವಾಗಿ ಉಸಿರಾಟ ಮಾಡಲು ಸಾಧ್ಯವಾಗುತ್ತದೆ.

ಸಾಸಿವೆಯನ್ನು ಉಪಯೋಗಿಸಿ ಡಿಕಾಕ್ಷನ್ ತಯಾರಿಸಿ ಕೊಂಡು ಕುಡಿಯುವುದರಿಂದ ದೇಹದಲ್ಲಿನ ವಿಷ ವಸ್ತುಗಳನ್ನು ಹೊರ ಹಾಕಲು ಸಹಾಯವಾಗುತ್ತದೆ.

ಸಾಸಿವೆಯೂ ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.

ಸಾಸಿವೆಯ ಎಣ್ಣೆಯನ್ನು ಕೂದಲಿನ ಆರೋಗ್ಯಕ್ಕೆ ಸಹ ಬಳಕೆ ಮಾಡಬಹುದು.

ನರವ್ಯೂಹದ ಆರೋಗ್ಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಹಿಳೆಯರಲ್ಲಿ ಮೆನೋಪಸ್ ಸಮಯದಲ್ಲಿ ಮಾಡಬಹುದಾದ ಕಿರಿಕಿರಿಗಳ ನಿಯಂತ್ರಣಕ್ಕೆ ಸಾಸಿವೆಯು ಸಹಕಾರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!