Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಧನರಾಜ್ ಕಾಮಿಡಿಗೆ ಲಾಯರ್ ಜಗದೀಶ್ ಕೋಪ ಠುಸ್..!

Facebook
Twitter
Telegram
WhatsApp

 

 

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಶುರುವಾಗಿವೆ. ಟಾಸ್ಕ್ ಗಳು ಶುರುವಾದಾಗಲೇ ಜಗಳಗಳು ಹೆಚ್ಚಾಗುವುದು. ಗೆಲ್ಲುವುದಕ್ಕೆಂದು ಆಡುವ ಆಟಗಳು ಅಲ್ಲಿ ಸ್ಪರ್ಧೆಯಾಗಿ ಕಾಣಿಸುತ್ತದೆ. ನಾನೇ ಗೆಲ್ಲಬೇಕೆಂಬ ಛಲವೂ ಒಬ್ಬರಿಗೊಬ್ಬರಲ್ಲಿ ಶುರುವಾಗುತ್ತೆ. ಇಂದು ಆಟ ಆಡುವಾಗಲೇ ಕಾಮಿಡಿಯೂ ನಡೆದಿದೆ.

 

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಚೈತ್ರಾ ಕುಂದಾಪುರ, ಜಗದೀಶ್, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಮಾನಸ, ಮೋಕ್ಷಿತಾ ಇವರುಗಳು ನಾಮಿನೇಷನ್ ಆಗಿದ್ದಾರೆ. ಇದರ‌ ನಡುವೆ ನಾಮಿನೇಷನ್ ನಿಂದ ಪಾರಾಗುವುದಕ್ಕೂ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದೆ. ನೇತಾಡುವ ಬುಟ್ಟಿಗಳಿಗೆ ಕೈನಲ್ಲಿ ತೆಗೆದುಕೊಂಡು ಹೋಗಿ ಮಣ್ಣು ತುಂಬಿಸುವುದು.

 

ಪ್ರತಿಸಲ ಟಾಸ್ಕ್ ಕೊಟ್ಟಾಗಲು ಬಿಗ್ ಬಾಸ್ ಒಬ್ಬರನ್ನ ರೆಫ್ರಿಯಾಗಿ ನಿಲ್ಲಿಸುತ್ತದೆ. ಈ ಬಾರಿ ರೆಫ್ರಿಯಾಗಿ ಧನರಾಜ್ ಆಚಾರ್ಯ ನಿಂತಿದ್ದಾರೆ. ರೂಲ್ಸ್ ಏನು, ಹೇಗೆ ಆಡಬೇಕು ಎಂಬುದನ್ನು ಓದಿ ಹೇಳಿದ್ದಾರೆ. ಆದರೆ ಲಾಯರ್ ಜಗದೀಶ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿಯೇ ಮುಂದೆ ಇರುತ್ತಾರೆ. ಯಾರಿಗೂ ಹಾನಿ ಮಾಡಬಾರದು ಎಂಬುದು ರೂಲ್ಸ್ ನಲ್ಲಿ ಇದೆ. ಆದರೆ ಲಾಯರ್ ಜಗದೀಶ್ ಆಡುವಾಗ ಯಮುನಾ ಅವರನ್ನು ತಳ್ಳಿ ಬೀಳಿಸಿದ್ದಾರೆ. ಆಗ ಧನರಾಜ್ ತಳ್ಳುವಂತೆ ಇಲ್ಲ. ರೂಲ್ಸ್ ಬ್ರೇಕ್ ಎಂದು ಚೀರಿದ್ದಾರೆ.

 

ಧನರಾಜ್ ಈ ರೀತಿ ಹೇಳಿದ್ದಕ್ಕೆ ಲಾಯರ್ ಜಗದೀಶ್ ಕೆಂಡಾಮಂಡಲರಾಗಿದ್ದಾರೆ. ರೆಫ್ರಿ ಆಗೋದಕ್ಕೆ ಫಿಟ್ ಇಲ್ಲ ಎಂದು ಜಗದೀಶ್ ಹೇಳಿದ ಕೂಡಲೇ ಧನರಾಜ್, ಹೋಯ್ ಸುಮ್ಮನೆ ಕೂತ್ಕೊ ಅಂತೀರಾ. ನೀನ್ ಯಾರ್ ಹೇಳೋಕೆ ಎಂದು ಚೀರಿದ್ದಾರೆ. ಆದರೆ ಧನರಾಜ್ ಮುಖದಲ್ಲಿ ಕೋಪಕ್ಕಿಂತ ಹೆಚ್ಚಾಗಿ ಆ ಕೋಪದಲ್ಲೂ ಕಾಮಿಡಿಯೇ ಕಾಣಿಸುತ್ತಾ ಇತ್ತು. ಬಿಗ್ ಬಾಸ್ ಮನೆಗೆ ಧನರಾಜ್ ಬಂದಾಗಿನಿಂದ ಬಿಗ್ ಬಾಸ್ ಆಟ ಆಡಿಸುತ್ತಿದೆ. ಒಳ್ಳೆ ಎಂಟರ್ ಟೈನರ್ ಆಗಿದ್ದಾರೆ.

 

ಈ ಜಗಳ ಅತಿರೇಕಕ್ಕೆ ಹೋಗಿತ್ತು. ಕೈ ಸನ್ನೆಯನ್ನು ಧನರಾಜ್ ಕಾಮಿಡಿ ಮಾಡಿದ್ದಾರೆ. ಸದಾ ಕೋಪದಲ್ಲಿದ್ದ ಜಗದೀಶ್ ಮುಖದಲ್ಲೂ ಧನರಾಜ್ ಇಮೋಜಿ ನಗು ತರಿಸಿದೆ. ಮುಖದಲ್ಲಿ ನಗು ಮೂಡಿದ್ದು ಕಾಣಿಸಿದೆ. ಮನೆ ಮಂದಿಯೆಲ್ಲಾ ಜೋರಾಗಿ ನಕ್ಕಿದ್ದಾರೆ. ಜಗಳದ ನಡುವೆಯೂ ಧನರಾಜ್ ಮಾತಿನಿಂದ ಮನೆ ತಣ್ಣಗೆ ಆಗಿದೆ. ಧನರಾಜ್ ಕೋಪ ಮಾಡಿಕೊಂಡರೆ ಸಿನಿಮಾದಲ್ಲಿ ಸಾಧುಕೋಕಿಲಾ ಅವರನ್ನೇ ನೋಡಿದಂತೆ ಫೀಲ್ ಆಯ್ತು. ಧನರಾಜ್ ಅವರಿಂದ ಒಂದೊಳ್ಳೆ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Acidity : ಅಸಿಡಿಟಿಯಿಂದ ಬಳಲುತ್ತಿದ್ದೀರಾ ? ಇದನ್ನು ದಿನಕ್ಕೆ ಎರಡು ಬಾರಿ ಮಾಡಿ..!

  ಸುದ್ದಿಒನ್ : ಕೆಲವರು ಸ್ವಲ್ಪ ತಿಂದ ನಂತರ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಾರೆ. ಇದು ದೇಹದ ಅಸ್ವಸ್ಥತೆ ಮತ್ತು ಎದೆಯುರಿ ಉಂಟುಮಾಡುತ್ತದೆ. ಈ ಹಠಾತ್ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಕೆಳಗಿನ ಮನೆಮದ್ದುಗಳನ್ನು ಪ್ರಯತ್ನಿಸಿ

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ, ಶನಿವಾರ- ರಾಶಿ ಭವಿಷ್ಯ ಅಕ್ಟೋಬರ್-5,2024 ಸೂರ್ಯೋದಯ: 06:10, ಸೂರ್ಯಾಸ್ತ : 05:58 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

error: Content is protected !!