ಸಿದ್ದರಾಮಯ್ಯರಿಗೆ ಸುತ್ತಿಕೊಂಡ ಮೂಡಾ ಕೇಸ್ : ಸಹೋದರ ಹೇಳಿದ್ದೇನು..?

suddionenews
1 Min Read

ಮೈಸೂರು: ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ವಿಪಕ್ಷ ನಾಯಕರು ಹೋರಾಟವನ್ನೇ ಮಾಡುತ್ತಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಗಳನ್ನು ವಾಪಾಸ್ ನೀಡುತ್ತೇನೆಂದು ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಸಹೋದರ ಸಿದ್ದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಆ ಕೆಲಸ ಮಾಡುವುದಕ್ಕೆ ಹೋಗಿಯೇ ಇಲ್ಲ. ಇದು ನಮ್ಮ ಅತ್ತಿಗೆಗೆ ಗೊತ್ತು, ಅವನಿಗೆ ಗೊತ್ತಿಲ್ಲ. ದಿನ ದಿನ ಮೂಡಾ ಸೈಟ್ ಅಂತ ಹೇಳ್ತಾ ಇದಾರೆ. ಬೆಳಗ್ಗೆ ತಾನೇ ವಾಪಸ್ ಕೊಟ್ರು ಅನ್ನೋದು ಗೊತ್ತಾಯ್ತು. ಇದ್ರಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತಾರೆ. ಅದೆಂಗೆ ಹಿಂದಕ್ಕೆ ಕೊಟ್ರು ಅಲ್ವಾ. ಯಾಕ್ ರಾಜೀನಾಮೆ ಕೊಡಬೇಕು. ಇವರ ಮೇಲೆ ಹೊರಿಸಬೇಕಲ್ಲ ಅಂತ ಹೊರಿಸಿದ್ದಾರೆ. 40 ವರ್ಷದಿಂದ ಒಂದು ಕಪ್ಪು ಚುಕ್ಕೆ ಬಿದ್ದಿಲ್ಲ. ಹೆಂಗಾದ್ರೂ ಮಾಡಿ ಕೆಡವಬೇಕು ಅಂತ ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಈ ಥರ ಮಾಡಿದ್ದಾರೆ.

ನಮ್ಮ ತಂದೆಯೇ ಸಾಕಷ್ಟು ಆಸ್ತಿ ಮಾಡಿದ್ದಾರೆ. ಮೂಡಾ ಸೈಟಿನ ವಿಚಾರ ನಮ್ಗೆ ಅಷ್ಟೊಂದು ಗೊತ್ತಿಲ್ಲ. ನಮ್ಮ ಅತ್ತಿಗೆಗೆ ಗೊತ್ತಿತ್ತೇನೋ ಆದರೆ ಅವರಿಗೆ ಗೊತ್ತಿಲ್ಲ. ಅಪ್ಪನ ಆಸ್ತಿ ಬಿಟ್ಟು ಬೇರೆ ಯಾವ ಆಸ್ತಿಯನ್ನು ಮಾಡಿಲ್ಲ ಎಂದು ಸಿದ್ದಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಪಾರ್ವತಿ ಅವರಿಗೆ ಅರಿಶಿನ ಕುಂಕುಮಕ್ಕೆ ಬಂದಿದ್ದು ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲ. ಇದಕ್ಕೂ ನನಗೂ ಸಂಬಂಧವಿರಲಿಲ್ಲ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಸಲ ಹೇಳಿದ್ದಾರೆ. ಈಗ ಅವರ ಸಹೋದರ ಕೂಡ ಅದನ್ನೇ ಹೇಳುತ್ತಿದ್ದಾರೆ. ರಾಜಕಾರಣದಲ್ಲಿ ಇಷ್ಟೆಲ್ಲ ಬೆಳವಣಿಗೆಯಾದ ಬೆನ್ನಲ್ಲೇ ಪಾರ್ವತಿ ಅವರು ಮೂಡಾ ಸೈಟುಗಳನ್ನು ವಾಪಾಸ್ ಮಾಡುತ್ತಿನೆಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks