Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

Bank Holiday | ಅಕ್ಟೋಬರ್ ತಿಂಗಳಲ್ಲಿ ಯಾವ್ಯಾವ ದಿನ ಬ್ಯಾಂಕ್ ರಜಾ ? ಇಲ್ಲಿದೆ ಮಾಹಿತಿ..!

Facebook
Twitter
Telegram
WhatsApp

ಸುದ್ದಿಒನ್ : ಹೆಚ್ಚಿನ ಜನರು ಪ್ರತಿದಿನ ಬ್ಯಾಂಕ್‌ಗಳಲ್ಲಿ ಯಾವುದಾದರೂ ಒಂದು ವಹಿವಾಟು ಮಾಡುತ್ತಿರುತ್ತಾರೆ. ಬ್ಯಾಂಕ್ ಗೆ ಹಣ ಹಾಕುವುದು, ತೆಗೆಯುವುದು ಅಥವಾ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದು ಹೀಗೆ ಸಾಕಷ್ಟು ಜನರು ಬ್ಯಾಂಕ್ ಗಳಿಗೆ ಹೋಗುತ್ತಿರುತ್ತಾರೆ. ಆಯಾ ತಿಂಗಳು ಬ್ಯಾಂಕ್ ರಜಾದಿನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಬ್ಯಾಂಕ್ ರಜಾದಿನಗಳಲ್ಲಿ ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು. ಇದರಿಂದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಇನ್ನೇನು ಸೆಪ್ಟೆಂಬರ್ ತಿಂಗಳು ಮುಗಿಯತ್ತಿದೆ. ಅಕ್ಟೋಬರ್ ತಿಂಗಳು ಬರುತ್ತಿದೆ. ಆರ್ ಬಿಐ ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿಯ ಪ್ರಕಾರ ಮುಂದಿನ ತಿಂಗಳು ಬ್ಯಾಂಕ್ ಗಳಿಗೆ ಸಾಕಷ್ಟು ರಜೆಗಳು ಬರಲಿವೆ. ಬರೋಬ್ಬರಿ ಅರ್ಧ ತಿಂಗಳು ಅಂದರೆ 14 ದಿನ ಬ್ಯಾಂಕ್ ರಜೆ ಇರಲಿದೆ.

ಅಕ್ಟೋಬರ್ ತಿಂಗಳಲ್ಲಿ ಅನೇಕ ದೊಡ್ಡ ಹಬ್ಬಗಳಿವೆ. ಗಾಂಧಿ ಜಯಂತಿಯಿಂದ ದಸರಾದವರೆಗೆ ಈ ತಿಂಗಳಲ್ಲಿ ಅನೇಕ ಹಬ್ಬಗಳು ಇವೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಗೂ ರಜೆ ಇರುತ್ತದೆ. ಆರ್‌ಬಿಐ ರಜೆಯ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಸುಮಾರು 10 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನೀವು ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ಮುಂದೆ ಯೋಜಿಸುವುದು ಉತ್ತಮ. ಅಕ್ಟೋಬರ್‌ನಲ್ಲಿ ಯಾವ ದಿನಗಳು ಯಾವ್ಯಾವ ಸ್ಥಳಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಎಂದು ತಿಳಿಯೋಣ.

• ಅಕ್ಟೋಬರ್ 02: ಗಾಂಧಿ ಜಯಂತಿಯಂದು ದೇಶಾದ್ಯಂತ ಬ್ಯಾಂಕ್ ರಜೆ

• ಅಕ್ಟೋಬರ್ 06: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ

• ಅಕ್ಟೋಬರ್ 11: ಮಹಾ ನವಮಿ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ .

• ಅಕ್ಟೋಬರ್ 12: ಆಯುಧ ಪೂಜೆ, ದಸರಾ, ಎರಡನೇ ಶನಿವಾರ ದೇಶದಾದ್ಯಂತ ಬ್ಯಾಂಕ್ ರಜೆ

• ಅಕ್ಟೋಬರ್ 13: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

• ಅಕ್ಟೋಬರ್ 17: ವಾಲ್ಮೀಕಿ ಜಯಂತಿಯಂದು ಕರ್ನಾಟಕ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಒಡಿಶಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳು ರಜೆ.

• ಅಕ್ಟೋಬರ್ 20: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟವು

• ಅಕ್ಟೋಬರ್ 26: ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್‌ಗಳು ರಜೆ.

• ಅಕ್ಟೋಬರ್ 27: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ

• ಅಕ್ಟೋಬರ್ 31: ದೀಪಾವಳಿಯ ಕಾರಣ ದೇಶದಾದ್ಯಂತ ಬ್ಯಾಂಕುಗಳಿಗೆ ರಜೆ.

(ಪ್ರಮುಖ ಸೂಚನೆ : ಈ ಬ್ಯಾಂಕ್ ರಜಾದಿನಗಳು ಎಲ್ಲಾ ರಾಜ್ಯಗಳಿಗೆ ಅನ್ವಯಿಸುವುದಿಲ್ಲ. ಆಯಾ ರಾಜ್ಯಗಳ ಹಬ್ಬಗಳು ಮತ್ತು ಇತರ ಘಟನೆಗಳು ಬದಲಾಗಬಹುದು ಎಂಬುದನ್ನು ಗಮನಿಸಿ.)

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿಂದೂ ಮಹಾಗಣಪತಿ ಶೋಭಯಾತ್ರೆ ವೇಳೆ ದರ್ಶನ್ ಭಾವಚಿತ್ರ ಬಾವುಟ ಹಾರಾಟಕ್ಕೆ ಬ್ರೇಕ್..!

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆ

ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ದೇಶದಲ್ಲಿಯೇ ಹೆಸರುವಾಸಿ : ನೀರಜ್ ದೋನೆರಿಯಾ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್ 28 : ನಾವೆಲ್ಲಾ ಹಿಂದೂ ಒಗ್ಗಟ್ಟಾಗಿ ಇರಬೇಕಿದೆ. ಬಿಡಿ ಬಿಡಿಯಾದರೆ ಬಲವಿಲ್ಲ, ಇಂತಹ ಧಾರ್ಮಿಕ ಕಾರ್ಯಕ್ರಮಗಳ

ಮಹಿಷಾ ಮಂಡೋಲೋತ್ಸವಕ್ಕೆ ಸರ್ಕಾರ ಅನುಮತಿ ನೀಡುತ್ತಾ..? ಸಚಿವ ಮಹದೇವಪ್ಪ ಹೇಳಿದ್ದೇನು..?

  ಮೈಸೂರು: ದಸರಾ ಸಂಭ್ರಮ ಶುರುವಾದಾಗ ಮಹಿಷಾ ಮಂಡಲೋತ್ಸವದ ವಿಚಾರ ಚರ್ಚೆಗೆ ಬರುತ್ತದೆ. ಇದೀಗ ಮಹಿಷಾ ಮಂಡೋಲೋತ್ಸವದ ಬಗ್ಗೆ ಸಚಿವ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇದು ಜನರ ದಸರಾ ಆಗಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ

error: Content is protected !!