Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಡಿಕೆ ಬೆಲೆಯಲ್ಲಿ ಕುಸಿತ.. ಕೊಬ್ಬರಿ ಬೆಲೆಯಲ್ಲಿ ಏರಿಕೆ..!

Facebook
Twitter
Telegram
WhatsApp

ಅಡಿಕೆ ಬೆಳೆಗಾರರಿಗೆ ಬೇಸರದ ಸಂಗತಿ ಇದಾಗಿದೆ. ಕಷ್ಟ ಒಟ್ಟು ಬೆಳೆಯನ್ನು ಉಳಿಸಿಕೊಂಡರು ಬೆಲೆ ಮಾತ್ರ ಕುಸಿತ ಕಂಡಿದೆ. ಈಚೆಗಷ್ಟೇ ಒಳ್ಳೆಯ ಬೆಲೆ ಸಿಕ್ಕಿತ್ತು. ಆದರೆ ಇದೀಗ ದಿಢೀರನೇ ಅಡಿಕೆ ಬೆಲೆ 45 ಸಾವಿರ ರೂಪಾಯಿ ಆಸುಪಾಸಿಗೆ ಕುಸಿದೆ. ಸುಮಾರು ಹತ್ತು ಸಾವಿರ ರೂಪಾಯಿ ವ್ಯತ್ಯಾಸವಾಗಿದೆ. ಇದಿ ಸಹಜವಾಗಿಯೇ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

 

ರಾಶಿ ಅಡಿಕೆ ಬೆಲೆ 55 ಸಾವಿರ ರೂಪಾಯಿ ಮೀರಿತ್ತು. ಆ ಬಳಿಕ ಬೆಲೆಯಲ್ಲಿ ಕುಸಿತ ಕಾಣುತ್ತಲೇ ಇದೆಯೇ ವಿನಃ ಹೆಚ್ಚಾಗುತ್ತಿಲ್ಲ. 45 ಸಾವಿರ ಆಸುಅಸಿನಲ್ಲಿ ಮಾರಾಟವಾಗುತ್ತಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ರಾಶಿ ಅಡಿಕೆ ಬೆಲೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಉಳಿದಂತೆ 44-46 ಸಾವಿರ ರೂಪಾಯಿ ನಡುವೆಯೇ ಮಾರಾಟವಾಗುತ್ತಿದೆ. ಸೋಮವಾರ ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 30,199 ಒದ್ದರೆ ಗರಿಷ್ಠ 48,451 ರೂಪಾಯಿ ಆಗಿತ್ತು. ಹಾಗೇ ಕೆಂಪುಗೋಟು ಕ್ವಿಂಟಾಲ್ ಗೆ ಕನಿಷ್ಠ 20,899 ಇದ್ದರೆ ಗರಿಷ್ಠ 32,199 ಆಗಿತ್ತು.

 

ಒಂದು ಕಡೆ ಅಡಿಕೆ ಬೆಲೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ತೆಂಗು ಬೆಳೆಗಾರರಿಗೆ ಬಹಳ ಕಾಯುವಿಕೆ ನಂತರ ಬೆಲೆ ಏರಿಕೆಯ ಸಿಹಿ ಸಿಕ್ಕಿದೆ. 10,000 ರೂಪಾಯಿ ಕೂಡ ದಾಟದ ಕೊಬ್ಬರಿ ಧಾರಣೆ, ಕಳೆದ ಕೆಲವು ದಿನಗಳಿಂದ 12,000 ರೂಪಾಯಿ ದಾಟಿದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 11,500 ರೂಪಾಯಿ ಗರಿಷ್ಠ 12,000 ರೂಪಾಯಿ ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಮತ್ತು ಗರಿಷ್ಠ 12,000 ರೂಪಾಯಿ ಆಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!