Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜನೆ : ನಿಮ್ಮ ಮಗುವಿನ ಹೆಸರು ನೊಂದಾಯಿಸಿ..!

---Advertisement---

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಶ್ರಾವಣ ಶುರುವಾಯ್ತು.. ಹಬ್ಬಗಳು ಆರಂಭವಾದವೂ.. ತಾಯಂದಿರ ನೆಚ್ಚಿನ ಕೃಷ್ಣಜನ್ಮಾಷ್ಠಮಿಯೂ ಬಂದೇ ಬಿಡ್ತು. ಇದೇ ತಿಂಗಳ 26 ರಂದು ಕೃಷ್ಣ ಜನ್ಮಾಷ್ಠಮಿಯ ಹಬ್ಬ ಇದೆ. ಅಂದ್ರೆ ಇನ್ನು ಐದೇ ದಿನ ಉಳಿದಿರುವುದು. ಈ ಕೃಷ್ಣಜನ್ಮಾಷ್ಠಮಿ ಅಂದ್ರೆ ತಾಯಂದಿರಿಗೆ ಬಹಳ ಇಷ್ಟ. ಯಾಕಂದ್ರೆ ತಮ್ಮ ಮಕ್ಕಳಿಗೆ ಕೃಷ್ಣ-ರುಕ್ಮಿಣಿ-ರಾಧೆಯ ವೇಷ ಹಾಕಿ ಸಂಭ್ರಮಿಸುತ್ತಾರೆ. ಮಕ್ಕಳಲ್ಲಿಯೇ ದೇವರನ್ನು ಕಾಣುತ್ತಾರೆ. ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಶಾಲೆಗಳಲ್ಲೂ ಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿರುತ್ತದೆ. ಸ್ಪರ್ಧೆಗಳು ನಡೆಯುತ್ತವೆ.

ಪ್ರತಿವರ್ಷದಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಬಹುಮಾನವನ್ನು ಗೆಲ್ಲಬಹುದು. ಕೆಲವೊಂದು ನಿಯಮಗಳು ಕೂಡ ಇದ್ದು, ಇಲ್ಲಿ ನೀಡಿರುವ ನಿಯಮಗಳು ಈ ಕೆಳಗಿನಂತೆ ಇದೆ. ಹಾಗೇ ಸಂಪರ್ಕಿಸಬೇಕಾದ ನಂಬರ್ ಕೂಡ ಇದೆ.

1.ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ವಯಸ್ಸು : 3 ರಿಂದ 7 ವರ್ಷದ ವಯಸ್ಸಿನ ಮಕ್ಕಳು
2.ಶ್ರೀಕೃಷ್ಣನ ಚಿತ್ರಕ್ಕೆ ಬಣ್ಣ ತುಂಬುವುದು ವಯಸ್ಸು : 8 ರಿಂದ 12 ವರ್ಷಗಳು. ನಾವು ಕೊಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ ಸ್ಕೆಚ್ ಪೆನ್ ಬಳಿಸಿ ಬಣ್ಣ ತುಂಬಬೇಕು.
3.ಶ್ರೀಕೃಷ್ಣನ ಚಿತ್ರ ಬಿಡಿಸುವುದು.ವಿಷಯ : ಸ್ವರ್ಗದಲ್ಲಿ ಶ್ರೀ ಕೃಷ್ಣ

ವಯಸ್ಸು: 13 ರಿಂದ 15 ವರ್ಷಗಳು

ದಿನಾಂಕ:25/08/2024
ಸಮಯ ಸಂಜೆ05: 30ಗೆ
ತಮ್ಮ ಹೆಸರನ್ನು ನೋಂದಾಯಿಸಲು 9449266185 6362551302 ಗೆ ಕರೆ ಮಾಡಿರಿ. ಸ್ಥಳ  ಸಭಾಂಗಣ, ಆಕಾಶವಾಣಿ ಹಿಂಭಾಗ, ಕೆಳಗೋಟೆ, ಚಿತ್ರದುರ್ಗ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...