Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರ ಎತ್ತಿದರೆ ಹೊಟ್ಟೆನೋವು ಬರುತ್ತಾ..? ಹರ್ನಿಯಾ ಆಗಿರಬಹುದು ಎಚ್ಚರ..!

Facebook
Twitter
Telegram
WhatsApp

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕೆಲವೊಂದು ಕಾಯಿಲೆಗೆ ಮೊದಲೇ ರೋಗ ಲಕ್ಷಣಗಳು ಕಂಡು ಬರುತ್ತವೆ. ಆ ಬಗ್ಗೆ ನಾವೂ ಎಚ್ಚರಗೊಳ್ಳಬೇಕಾಗುತ್ತದೆ. ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ತೋರಿಸುವುದು ಉತ್ತಮ. ಅದರಲ್ಲೂ ಭಾರ ಎತ್ತುವಾಗ ನಿಮಗೆ ಹೊಟ್ಟೆ ನೋವು ಬಂದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಅದು ಹರ್ನೀಯಾದ ಲಕ್ಷಣವೂ ಆಗಿರಬಹುದು.

ಈ ಹರ್ನಿಯಾ ಎಂದರೇನು..? ಯಾವ ರೀತಿಯ ಸಮಸ್ಯೆ ಕಾಡುತ್ತದೆ..?

ಹರ್ನಿಯಾ ಎಂದರೆ ಒಂದು ಅಂಗ ಅಥವಾ ಫ್ಯಾಟಿಯ ಅಂಗಾಂಶ ತನ್ನ ಸುತ್ತಲಿನ ಮಾಂಸ ಖಂಡದ ಕನೆಕ್ಟಿವ್ ಟಿಶ್ಯೂನ ಯಾವುದಾ ದರೂ ದುರ್ಬಲ ಭಾಗದಿಂದ ಹೊರಬಂದಂತಹ ಸಂದರ್ಭ ವನ್ನು ಹರ್ನಿಯಾ ಎಂದು ಕರೆಯಲಾಗುತ್ತದೆ. ಹರ್ನಿಯಾ ಸಮಸ್ಯೆಯಲ್ಲಿ ಬೇರೆ ಬೇರೆ ವಿಧಗಳಿವೆ. ಅದರಲ್ಲಿ ಹೊಟ್ಟೆಯ ಭಾಗದ ಹರ್ನಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ. ಹೊಟ್ಟೆಯ ದುರ್ಬಲ ಭಾಗದ ಮೂಲಕ ಕರುಳು ಹೊರ ಬಂದರೆ ಈ ರೀತಿ ಆಗುತ್ತದೆ. ಪ್ರತಿದಿನ ಯಾರು ಜಾಸ್ತಿ ಭಾರ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ ಅವರಿಗೆ ಈ ರೀತಿ ಆಗುತ್ತದೆ.​

ಹರ್ನಿಯಾ ಸಮಸ್ಯೆ ಇದ್ದರೆ ಚರ್ಮ ಊದಿಕೊಳ್ಳುತ್ತದೆ. ನಿಂತಾಗ, ಕೂತಾಗ, ಭಾರದ ವಸ್ತು ಎತ್ತಿದಾಗ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ.

* ಇದರ ಲಕ್ಷಣಗಳೆಂದರೆ, ಬಾಗಿದಾಗ, ಭಾರ ಎತ್ತಿದಾಗ ನೋವು ಕಾಣಿಸಿಕೊಳ್ಳುವುದು
* ಹೊಟ್ಟೆ ಊದಿಕೊಂಡಂತೆ ಕಾಣಿಸುವುದು
* ವಾಕರಿಕೆ, ವಾಂತಿ ಮತ್ತು ಜ್ವರ ಕಾಣಿಸುವುದು.

* ಒಂದು ವೇಳೆ ನಿಮಗೆ ಹರ್ನಿಯಾದ ಯಾವುದೇ ರೋಗ ಲಕ್ಷಣ ಗಳು ಇದ್ದರೆ, ಸೂಕ್ತವಾದ ಚಿಕಿತ್ಸೆಗಾಗಿ ತಕ್ಷಣವೇ ಡಾಕ್ಟರ್ ಬಳಿ ತೋರಿಸಿ ಕೊಳ್ಳಿ. ನಿಮಗೆ ಹರ್ನಿಯಾ ಯಾವ ಪ್ರಮಾಣದಲ್ಲಿದೆ ಎನ್ನುವುದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆಯ ಪ್ರಮಾಣ ಅವಲಂಬಿತ ವಾಗಿರುತ್ತದೆ. ಅಕ್ಕ ಪಕ್ಕದ ಅಂಗಾಂಗಗಳಿಗೆ ತೊಂದರೆಯಾಗ ದಂತೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.​

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

ದರ್ಶನ್ ಜಾಮೀನಿಗಾಗಿ ವಕೀಲರು ಮಂಡಿಸಿದ ವಾದವೇನು..? ಇಲ್ಲಿದೆ ಪಾಯಿಂಟ್ ಪಾಯಿಂಟ್ ಹೈಲೇಟ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಟಡಿ ಮಾಡುವ ಕಾರಣಕ್ಕೆ ಆಗಾಗ ದರ್ಶನ್

ದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!

ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಧೈರ್ಯ ತುಂಬಿ ಹೋಗಿದ್ದರು. ಇಂದು ಜಾಮೀನು ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್

error: Content is protected !!