ರಥ ಸಪ್ತಮಿ ವಿಶೇಷ : ಫೆಬ್ರವರಿ16 ರಂದು ವಿದ್ಯಾನಗರದಲ್ಲಿ ಸೂರ್ಯ ಸಮಸ್ಕಾರ ಕಾರ್ಯಕ್ರಮ

1 Min Read

ಸುದ್ದಿಒನ್, ಚಿತ್ರದುರ್ಗ. ಫೆ. 14 : ಪತಂಜಲಿ ಯೋಗ ಸಮಿತಿ ಹಾಗೂ ವಿದ್ಯಾ ನಗರ ಕ್ಷೇಮಾಭೀವೃದ್ದಿ ಸಂಘದವತಿಯಿಂದ ರಥ ಸಪ್ತಮಿ ಪ್ರಯುಕ್ತ ಫೆಬ್ರವರಿ 16ರಂದು ಬೆಳಿಗ್ಗೆ 5.30 ರಿಂದ 7.30ರವರೆಗೆ ಚಿತ್ರದುರ್ಗ ನಗರದ ವಿದ್ಯಾ ನಗರದ ಬಯಲು ರಂಗಮಂದಿರದ ಗಣೇಶ ಫೆಂಡಲ್ ಆವರಣದಲ್ಲಿ 108 ಬಾರಿ ಸೂರ್ಯ ಸಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಪತಂಜಲಿ ಯೋಗ ಸಮಿತಿಯ ಸಂಘ ಹಾಗೂ ವಿದ್ಯಾನಗರ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ. ಎಂದು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ದೇವನಂದ ನಾಯ್ಕ್ ಹಾಗೂ ವಿದ್ಯಾ ನಗರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ಜಿ.ಆರ್. ಪ್ರತಾಪ ರೆಡ್ಡಿಯವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *