Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವರ್ತೂರು ಸಂತೋಷ್ ಗೆ ಸಿಕ್ಕ ಹಣವೆಷ್ಟು ಗೊತ್ತಾ..?

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10 ಶೋಗೆ ಇಂದು ತೆರೆಬೀಳುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಫಿನಾಲೆಗೆ ಆರು ಜನ ಎಂಟ್ರಿ ಕೊಟ್ಟಿದ್ದರು.‌ ಫಿನಾಲೆ ವೇದಿಕೆಯಲ್ಲಿ ಒಬ್ಬೊಬ್ಬರೇ ಔಟ್ ಆಗುತ್ತಿದ್ದಾರೆ. ಕಡೆಯಲ್ಲಿ ಸುದೀಪ್ ಅವರೊಂದಿಗೆ ಇಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಹೀಗಾಗಿ ಒಬ್ಬಿಬ್ಬರೇ ಔಟ್ ಆಗುತ್ತಿದ್ದು, ನಾಲ್ಕನೆ ಸದಸ್ಯನಾಗಿ ವರ್ತೂರು ಸಂತೋಷ್ ಔಟ್ ಆಗಿದ್ದಾರೆ.

ವರ್ತೂರು ಸಂತೋಷ್ ಹಳ್ಳಿಕಾರ್ ಹಸುಗಳ ಮೂಲಕ ಕ್ಯಾತಿ ಪಡೆದಿದ್ದರು. ಈಗ ಬಿಗ್ ಬಾಸ್ ಗೆ ಬಂದ ಮೇಲೆ ಅಲ್ಲಿಂದ ಬಂದ ಹಣದಲ್ಲಿ ಹಳ್ಳಿಕಾರ್ ತಳಿಗೆ ಇನ್ವೆಸ್ಟ್ ಮಾಡ್ತೀನಿ ಅಂತಾನೇ ಹೇಳಿದ್ದರು. ಹೀಗಾಗಿಯೇ ವರ್ತೂರು ಸಂತೋಷ್ ಸಾಕಷ್ಟು ಜನ ಬೆಂಬಲ ಸಿಕ್ಕಿತ್ತು. ಮನೆಯಲ್ಲಿರುವ ಕಲಾವಿದರಿಗೆ ಅಷ್ಟೊಂದು ವೋಟ್ಸ್ ಬಂದಿರಲಿಲ್ಲ. ಆದರೆ ವರ್ತೂರು ಸಂತೋಷ್ ಗೆ ಅಷ್ಟು ದೊಡ್ಡ ಮಟ್ಟಕ್ಕೆ ಬಂದಿತ್ತು.

ಫಿನಾಲೆ ವೇದಿಕೆಯಲ್ಲಿ ವರ್ತೂರು ಸಂತೋಷ್ ಐದನೇ ಕಂಟೆಸ್ಟೆಂಟ್ ಆಗಿ ಆದರೂ ಇದ್ದೇ ಇರುತ್ತಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಫಿನಾಲೆ ತನಕ ವರ್ತೂರು ಸಂತೋಷ್ ಬಂದಿದ್ದರು. ಈಗ ನಾಲ್ಕನೆ ಸದಸ್ಯನಾಗಿ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಅವರಿಗೆ ಎರಡು ಲಕ್ಷ ಹಣ ಸಿಕ್ಕಿದೆ.

ಸುದೀಪ್ ಅವರು ಹೇಳಿದಂತೆ ಫಿನಾಲೆಗೆ ಬಂದವರು ಯಾರೇ ಹೋದರು ಅವರಿಗೆ ಗಿಫ್ಟ್ ಅಮೌಂಟ್ ಆಗಿ ಎಲ್ಲರಿಗೂ ಹಣ ಸಿಗಲಿದೆ ಎಂದಿದ್ದರು. ಆ ಮೂಲಕ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರಿಗೂ ತಲಾ ಎರಡು ಲಕ್ಷ ಹಣ ಸಿಕ್ಕಿದೆ. ಮೂರನೇ ಕಂಟೆಸ್ಟೆಂಟ್ ಆಗಿ ಬರುವವರಿಗೆ ಐದು ಲಕ್ಷ, ನಾಲ್ಕನೆ ಕಂಟೆಸ್ಟೆಂಟ್ ಗೆ ಏಳು ಲಕ್ಷ, ಐದನೇ ಕಂಟೆಸ್ಟೆಂಟ್ ಆಗಿ ಹೊರ ಬರುವವರಿಗೆ ಹತ್ತು ಲಕ್ಚ ಸಿಗಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪವಿತ್ರಾ ಜಯರಾಂ ನಿಧನ : ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆಯಿಂದ ಸಾವು..!

ಕಿರುತೆರೆ ನಟಿ ಪವಿತ್ರಾ ಜಯರಾಂ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ನಟ ದರ್ಶನ್ ಅವರ ಸಿನಿಮಾಕ್ಕೂ ಒಕೆ ಎಂದಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಹೈದ್ರಾಬಾದ್ ತಲುಪುವ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

error: Content is protected !!