Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಗನನ್ನು ವಾಪಾಸ್ ಕೊಟ್ಟಿದ್ದಕ್ಕೆ ಚಿರ ಋಣಿ : ಪ್ರತಾಪ್ ತಾಯಿ ಕಣ್ಣೀರು

Facebook
Twitter
Telegram
WhatsApp

ಇಂದು ಮತ್ತು ನಾಳೆ ಬಿಗ್ ಬಾಸ್ ಸೀಸನ್ 10 ಫಿನಾಲೆ ನಡೆಯುತ್ತಿದೆ. ನಾಳೆ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಕರ್ನಾಟಕದ ಮಂದಿಯಲ್ಲಿ ಇದೆ. ಒಂದು ಹಂತದಲ್ಲಿ ಇವರೇ ಆಗಬಹುದು ಎಂದು ಲೆಕ್ಕಾಚಾರ ಹಾಕಿದರು ಕೂಡ, ಎಷ್ಟೋ ಸೀಸನ್ ನಲ್ಲಿ ಅದು ಉಲ್ಟಾ ಆಗಿದೆ. ಹೀಗಾಗಿ ನಾಳೆಯ ದಿನಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ.

ಇಂದು ಫಿನಾಲೆಯ ವೇದಿಕೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂತಿದ್ದಾರೆ. ಒಳಗಿರುವ ಆರು ಸ್ಪರ್ಧಿಗಳ ಕುಟುಂಬಸ್ಥರು ಬಂದಿದ್ದಾರೆ. ಎಲ್ಲರಿಗೂ ಕುತೂಹಲ, ಟೆನ್ಶನ್ ಇದ್ದೆ ಇದೆ. ಇದೇ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ಬಂದಂತ ಆರೋಪಗಳಿಂದಾಗಿ ಮನೆಯವರ ಸಂಪರ್ಕವೇ ಇರಲಿಲ್ಲ. ತಂದೆ-ತಾಯಿಯ ಜೊತೆಗೆ ಮಾತನಾಡಿಯೇ ಮೂರು ವರ್ಷಗಳಾಗಿತ್ತು. ಆದರೆ ಬಿಗ್ ಬಾಸ್ ವೇದಿಕೆ ಟ್ರೋಫಿ ಕೊಡುತ್ತೋ ಬಿಡುತ್ತೋ ಪ್ರತಾಪ್ ಗೆ ಹೊಸ ಜೀವನವನ್ನೇ ನೀಡಿದೆ. ತಂದೆ – ತಾಯಿಗೆ ಮತ್ತೆ ಹೊಸ ಮಗನನ್ನು ಕೊಟ್ಟಿದೆ. ಪ್ರತಾಪ್ ಪೋಷಕರನ್ನು ವಾಪಾಸ್ ಕೊಟ್ಟಿದೆ.

ಇದೇ ಸಂತಸ, ಇದೇ ಖುಷಿ ಪ್ರತಾಪ್ ತಾಯಿ ಮುಖದಲ್ಲೂ ಕಾಣುತ್ತಿದೆ. ಅದಕ್ಕೆ ಆನಂದ ಬಾಷ್ಪ ಸುರಿಸಿದ್ದಾರೆ. ಸುದೀಪ್ ಅವರಿಗೂ, ಬಿಗ್ ಬಾಸ್ ಗೂ ಧನ್ಯವಾದ ತಿಳಿಸಿದ್ದಾರೆ. ‘ನಮ್ಮ ಮಗನನ್ನು ನಮಗೆ ವಾಪಸ್ ಕೊಟ್ಟಿದ್ದೀರಾ. ಈ ವೇದಿಕೆಗೆ ನಾವೂ ಸದಾ ಚಿರ ಋಣಿಗಳಾಗಿರುತ್ತೇವೆ’ ಎಂದಿದ್ದಾರೆ.

 

ಪ್ರತಾಪ್ ಆರಂಭದಲ್ಲಿ ಅಸಮರ್ಥರಾಗಿ ಬಂದಿದ್ದರು. ಮನೆಗೆ ಬಂದಾಗಲಂತು ಮನೆಯವರ ಚುಚ್ಚು ಮಾತಿನಿಂದಾನೇ ನೊಂದು ಹೋಗಿದ್ದರು. ಕಿಚ್ಚ ಸುದೀಪ್ ಕೊಟ್ಟಂತಹ ಸ್ಪೂರ್ತಿದಾಯಕ ಮಾತಿಗಳು, ಧೈರ್ಯ ಪ್ರತಾಪ್ ಮುನ್ನುಗ್ಗುವಂತೆ ಮಾಡಿತ್ತು. ಇಂದು ಫಿನಾಲೆಯ ಹಂತಕ್ಕೆ ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!