Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದರಾಮಯ್ಯ ಬಗ್ಗೆ ಅನಂತ್ ಕುಮಾರ್ ಹೆಗಡೆ ಆಡಿದ ಮಾತಿಗೆ ವಿ ಸೋಮಣ್ಣ ಏನಂದ್ರು..?

Facebook
Twitter
Telegram
WhatsApp

ಬೆಂಗಳೂರು: ಅಯೋಧ್ಯೆ142 ಕೋಟಿ ಭಾರತೀಯರದ್ದಲ್ಲ. ವಿಶ್ವದ ಭೂಪಟದಲ್ಲಿ, ಇಂಥ ದೊಡ್ಡ ಸಮಸ್ಯೆಯನ್ನು, ಈ ದೇಶದ ಇತಿಹಾಸವನ್ನು, ಈ ದೇಶದ ಸಂಸ್ಕೃತಿಯನ್ನು, ಈ ದೇಶದ ನೆಲೆಯಲ್ಲಿ, ಶ್ರೀರಾಮಚಂದ್ರನ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸುವಂತ ಜಾಗದಲ್ಲಿ ಮಾಡುತ್ತಾ ಇದ್ದಾರೆ. ನಾನು, ಇನ್ನೊಬ್ಬರು ಹೋಗಬೇಕೆಂಬ ವಿಚಾರಕ್ಕಿಂತ ಹೆಚ್ಚಾಗಿ, ಎಲ್ಲಾ ಭಾರತೀಯರಿಗೂ ಸಲ್ಲುತ್ತದೆ. ಶ್ರೀರಾಮಚಂದ್ರ ಒಬ್ಬ ದೇವರು. ನಂಬಿಕೆ ಎಂಬುದನ್ನು ಇಟ್ಟುಕೊಂಡು ಮಾಡಿದ್ದಕ್ಕೇನೆ ಪ್ರಧಾನಿ ಮೋದಿಯವರು ಯಶಸ್ಸು ಕಂಡಿದ್ದಾರೆ ಎಂದಿದ್ದಾರೆ.

 

ಇದೆ ವೇಳೆ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ದೆಹಲಿಗೆ ಹೋಗಿದ್ದೆ. ನಾಯಕರನ್ನು ಭೇಟಿ ಮಾಡುವುದರ ಜೊತೆಗೆ ದೇವಸ್ತಾನಗಳಿಗೂ ಓಡಾಡಿಕೊಂಡು ಬಂದಿದ್ದೀನಿ. ಸಾಮಾನ್ಯ ಜನರ ಬಗ್ಗೆ ಕಾಳಜಿ ಇಟ್ಟುಕೊಂಡು, ಬಡವರು ಬಡವರಾಗಿಯೇ ಉಳಿಯಬಾರದು ಎಂಬ ಒಳ್ಳೆಯ ಭಾವನೆ ಇಟ್ಟುಕೊಂಡು ಕೆಲಸ ಮಾಡಿದರೆ, ಒಳ್ಳೆಯದ್ದೆ ಆಗುತ್ತೆ ಎಂಬಂತೆ ಈ ಸಲದ ದೆಹಲಿಯ ಯಾತ್ರೆ ನನಗೆ ದೊಡ್ಡ ಅನುಭವವನ್ನೇ ಕೊಟ್ಟರು‌. ಜೆಪಿ ನಡ್ಡಾ ಅವರು, ಸಂತೋಷ್ ಜೀ ಅವರು, ಅಮಿತ್ ಶಾ ಜೀ ಅವರು ಸಿಕ್ಕಿದ್ರು. ಅವರು ಕೊಟ್ಟಂತ ಸಲಹೆ ಸೂಚನೆ, ಅವರ ನಡವಳಿಕೆ, ಅವರ ಅಂತರಾಳದ ಮಾತುಗಳನ್ನು ಕೇಳಿದಾಗ ಒಬ್ಬ ರಾಜಕಾರಣಿ ಆದವರು, ದೊಡ್ಡವರ ಮಾತು ಕೇಳಿದಾಗ ಆಗುವ ತೊಂದರೆಗೆ ಎಲ್ಲೋ ಒಂದು ಕಡೆ ಯಾವ ರೀತಿ ನೋವು ಕೊಡುತ್ತದೆ ಎಂಬುದು ಇದರಿಂದ ಅರ್ಥವಾಗಿದೆ. ರಾಷ್ಟ್ರಕ್ಕೆ ಮೋದಿಯವರ ಅಗತ್ಯವಿದೆ ಎಂದಿದ್ದಾರೆ.

 

ಅನಂತ್ ಕುಮಾರ್ ಹೆಗಡೆ ಅವರ ಸ್ಟೇಟ್ಮಂಟ್ ಕೂಡ ಗಮನಿಸಿದ್ದೀನಿ. ಅವರು ಒಬ್ಬ ಹಿರಿಯ ನಾಯಕ. ನಾನು ಅವರ ನಿಶ್ಕಲ್ಮಶ ಭಾವನೆಯನ್ನು ನೋಡಿದ್ದೀನಿ. ಏನು ಬಾಯಿಗೆ ಬರುತ್ತೆ, ಅದನ್ನೇ ಹೇಳುತ್ತಾರೆ ನನ್ನ ಥರ. ಹಿಂದೆ ಮುಂದೆ ನೋಡಲ್ಲ. ಆದರೆ ಅವರು ಸಿದ್ದರಾಮಯ್ಯ ಅಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಸಿದ್ದರಾಮಯ್ಯ ಅವರು ಎಷ್ಟರಮಟ್ಟಿಗೆ ಮಾತನಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅನಂತ್ ಕುಮಾರ್ ಹೆಗಡೆ ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಮ್ಮ ಭಾಷೆಯನ್ನು ನಾವೇ ಹಿಡಿತದಲ್ಲಿ ಇಡದೆ ಹೋದರೆ, ನಂಗೆ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

ಚಿತ್ರದುರ್ಗ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ : 100 ಕ್ಕೆ 100 ಫಲಿತಾಂಶ ಪಡೆದ 13 ಶಾಲೆಗಳು

ಸುದ್ದಿಒನ್, ಚಿತ್ರದುರ್ಗ, ಮೇ. 09 :   ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ

error: Content is protected !!