Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನೆಯಿಂದ ಹೊರಹೋಗೋದು ತುಕಾಲಿ ಸಂತೂನಾ..? : ಸಂತು – ಪಂತು ಕಣ್ಣೀರಿಗೆ ಕರಗಿದ ಬಿಗ್ ಬಾಸ್

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10 ಫಿನಾಲೆಗೆ ಸನಿಹವಾಗಿದೆ. ಮನೆ ಮಂದಿಯ ಆಟವೂ ಹಾಗೇ ಇದೆ. ಕಡೆಯ ಲಕ್ಸುರಿ ಬಜೆಟ್ ಅನ್ನು ಸುಲಭವಾಗಿಯೇ ಕಳೆದುಕೊಂಡಿದ್ದಾರೆ. ಇದರ ನಡುವೆ ಮನೆಯಿಂದ ಇಂದು ಹೊರಹೋಗುವವರು ಯಾರು..? ಫಿನಾಲೆಗೆ ಉಳಿದುಕೊಳ್ಳುವುದು ಯಾರು ಎಂಬುದೇ ಕುತೂಹಲಕಾರಿಯಾಗಿದೆ. ಈಗಾಗಲೇ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳಲ್ಲಿ ಸಂಗೀತಾ ಗೆಲುವು ಕಂಡಿದ್ದಾರೆ. ಫಿನಾಲೆಗೆ ಟಿಕೆಟ್ ಪಡೆದು ಸೇಫ್ ಆಗಿದ್ದಾರೆ.

ಪ್ರತಾಪ್ ಕೂಡ ಮುಂಚೂಣಿಯಲ್ಲಿದ್ದಾರೆ. ನಮ್ರತಾ 3ನೇ ಸ್ಥಾನದಲ್ಲಿದ್ದಾರೆ. ನಮ್ರತಾ ಸೇರಿದಂತೆ ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ತನಿಷಾ ನಾಮಿನೇಟ್ ಆಗಿದ್ದಾರೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಅವರು ತುಕಾಲಿ ಸಂತೋಷ್ ಎಂದೇ ಊಹೆ ಮಾಡಲಾಗಿದೆ.

ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ‘ಸಂತು-ಪಂತು ಒಬ್ಬರಿಗೆ ಇಂದು ಜರ್ನಿ ಮುಗಿಯಲಿದೆ’ ಎಂದಿದ್ದಾರೆ. ವರ್ತೂರು ಸಂತೋಷ್, ತುಕಾಲಿಗೆ. ತುಕಾಲಿ ಸಂತೋಷ್ ವರ್ತೂರು ಸಂತೋಷ್ ಅವರಿಗೆ ಬೆಂಬಲ ನೀಡಿದ್ದಾರೆ. ಇಬ್ಬರ ಫ್ರೆಂಡ್ಶಿಪ್ ನೋಡಿ ಸುದೀಪ್ ಕೂಡ ಶಬ್ಬಾಶ್ ಹೇಳಿದ್ದಾರೆ.

 

ಈ ಸೀಸನ್ ನಲ್ಲಿ ಯಾರಲ್ಲೂ ನೋಡಿರದ ಬಾಂಧವ್ಯವನ್ನು ನಿಮ್ಮಲ್ಲಿ ನೋಡಿದ್ದೇನೆ ಎಂದಿದ್ದಾರೆ. ಈ ಸೀಸನ್ ನಲ್ಲಿ ಆರಂಭದಿಂದ ಕಡೆಯವರೆಗೂ ಒಳ್ಳೆ ಸ್ನೇಹ ಕಾಪಾಡಿಕೊಂಡು ಬಂದಿದ್ದು ಇವರಿಬ್ಬರೇನೆ. ಯಾರಲ್ಲಿಯೂ ಮನೆ ಬಿಟ್ಟು ಹೋಗ್ತಾ ಇದ್ದೀವಿ ಅನ್ನೋ ಫೀಲಿಂಗ್ಸ್ ಇಲ್ಲ. ಯಾರೂ ಆ ಭಾವನೆಯನ್ನು ವ್ಯಕ್ತಪಡಿಸುತ್ತಲೂ ಇಲ್ಲ. ಗೇಮ್ ಗೇಮ್ ಗೇಮ್ ಅಷ್ಟೇ. ಆದರೆ ನಿನ್ನೆ ರಾತ್ರಿ ಕೂಡ ತುಕಾಲಿ ಹಾಗೂ ವರ್ತೂರು ಇನ್ನು ಕೆಲವೇ ದಿನಗಳಲ್ಲಿ ಈ ಜರ್ನಿ ಮುಗಿದು ಬಿಡುತ್ತದೆ ಎಂದೇ ಕಣ್ಣೀರು ಹಾಕಿದ್ದರು. ಇದೀಗ ಬಿಗ್ ಬಾಸ್ ಇವರಿಬ್ಬರ ಬಾಂಧವ್ಯಕ್ಕೆ ಮನಸೋತಿದೆ. ಮೂಲಗಳ ಪ್ರಕಾರ ಇಂದು ಬಿಗ್ ಬಾಸ್ ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ತುಕಾಲಿ ಕೂಡ ಸೇವ್ ಆಗಿದ್ದಾರೆ. ಆದರೆ ವಾರದ ನಡುವೆ ಒಬ್ಬರನ್ನು ಮನೆಗೆ ಕಳುಹಿಸಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!