Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುನೀತ್ ಸಮಾಧಿ ನೋಡಲು ತುಮಕೂರಿನಿಂದ ಎತ್ತಿನಗಾಡಿಯಲ್ಲೇ ಬಂದ ಅಭಿಮಾನಿ..!

Facebook
Twitter
Telegram
WhatsApp

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರನ್ನ ಪ್ರೀತಿಸುವ ಅಪಾರ ಅಭಿಮಾನಿ ಬಳಗವೇ ಇದೆ. ಪುನೀತ್ ಕೂಡ ಅಭಿಮಾನಿಗಳ ಬಳಿ ಹಾಗೆಯೇ ಇದ್ರು. ಅವರಿಲ್ಲ ಅನ್ನೋದನ್ನ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಂತಿಮ ದರ್ಶನ ಮಾಡಲು ಆಗದವರು ಅವರ ಸಮಾಧಿ ದರ್ಶನವನ್ನಾದರೂ ಮಾಡಿ ಪುನೀತರಾಗೋಣಾ ಅನ್ನೋ ಭಾವನೆ ಹೊಂದಿದ್ದಾರೆ. ಅದಕ್ಕಾಗಿಯೇ ಈಗಲೂ ಅವರ ಸಮಾಧಿ ದರ್ಶನ ಮಾಡಲು ದೂರದೂರುಗಳಿಂದ ಬರ್ತಾ ಇದ್ದಾರೆ.

ಇಲ್ಲೊಬ್ಬ ಅಭಿಮಾನಿ ಸಮಾಧಿ ದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬಂದಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದಿಂದ ಎತ್ತಿನಗಾಡಿಯಲ್ಲಿಯೇ ಬಂದಿದ್ದಾರೆ. ಎತ್ತಿನ ಗಾಡಿಗೆ ಅಪ್ಪು ಪೋಟೋ ಹಾಕಿಕೊಂಡು ಬಂದ ಅಭಿಮಾನ ಮೆರೆದಿದ್ದಾರೆ. ನಿನ್ನೆ ಸಂಜೆ ಆರು ಗಂಟೆ ಗೆ ಪಾವಗಡ ಬಿಟ್ಟು ಮಧ್ಯರಾತ್ರಿ‌ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.

ದಯಾನಂದ್ ಎಂಬಾತ ಹೀಗೆ ಪಾವಗಡದಿಂದ ಎತ್ತಿನಗಾಡಿಯಲ್ಲಿ ಬಂದಿರೋ ಅಭಿಮಾನಿ. ಶಿವಣ್ಣ ಅವರನ್ನು ಭೇಟಿ ಮಾಡಬೇಕು. ಅಣ್ಣನ್ನ ನಾವು ಕಳೆದುಕೊಂಡಿದೀವಿ ಶಿವಣ್ಣರನ್ನ ಮಾತಾಡಿಸಬೇಕು ಎಂದು ಆ ಅಭಿಮಾನಿ‌ ಮನವಿ ಮಾಡಿಕೊಂಡಿದ್ದಾನೆ.

ಅಪ್ಪು ಸರ್ ರೈತರಿಗೆ ತುಂಬಾ ಸಹಾಯ ಮಾಡಿದ್ದಾರೆ ಆಗಾಗಿ ಎತ್ತಿನಗಾಡಿಲಿ ದರ್ಶನಕ್ಕೆ ಬಂದೆ. ಮೂರು ದಿನದಿಂದ ಊಟ ಮಾಡಿಲ್ಲ, ನಿದ್ದೆ ಮಾಡಿಲ್ಲ ಬೇಸಾಯ ಮಾಡಿಲ್ಲ. ಅಪ್ಪು ಸರ್ ಇಲ್ಲ ಅನ್ನೋ ನೋವು ತುಂಬಾ ಕಾಡ್ತಿದೆ ಎಂದು ಆ ಅಭಿಮಾನಿ ನೋವು ತೋಡಿಕೊಂಡಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!