Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುನೀತ್ ಸಮಾಧಿ ನೋಡಲು ತುಮಕೂರಿನಿಂದ ಎತ್ತಿನಗಾಡಿಯಲ್ಲೇ ಬಂದ ಅಭಿಮಾನಿ..!

Facebook
Twitter
Telegram
WhatsApp

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರನ್ನ ಪ್ರೀತಿಸುವ ಅಪಾರ ಅಭಿಮಾನಿ ಬಳಗವೇ ಇದೆ. ಪುನೀತ್ ಕೂಡ ಅಭಿಮಾನಿಗಳ ಬಳಿ ಹಾಗೆಯೇ ಇದ್ರು. ಅವರಿಲ್ಲ ಅನ್ನೋದನ್ನ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಂತಿಮ ದರ್ಶನ ಮಾಡಲು ಆಗದವರು ಅವರ ಸಮಾಧಿ ದರ್ಶನವನ್ನಾದರೂ ಮಾಡಿ ಪುನೀತರಾಗೋಣಾ ಅನ್ನೋ ಭಾವನೆ ಹೊಂದಿದ್ದಾರೆ. ಅದಕ್ಕಾಗಿಯೇ ಈಗಲೂ ಅವರ ಸಮಾಧಿ ದರ್ಶನ ಮಾಡಲು ದೂರದೂರುಗಳಿಂದ ಬರ್ತಾ ಇದ್ದಾರೆ.

ಇಲ್ಲೊಬ್ಬ ಅಭಿಮಾನಿ ಸಮಾಧಿ ದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬಂದಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದಿಂದ ಎತ್ತಿನಗಾಡಿಯಲ್ಲಿಯೇ ಬಂದಿದ್ದಾರೆ. ಎತ್ತಿನ ಗಾಡಿಗೆ ಅಪ್ಪು ಪೋಟೋ ಹಾಕಿಕೊಂಡು ಬಂದ ಅಭಿಮಾನ ಮೆರೆದಿದ್ದಾರೆ. ನಿನ್ನೆ ಸಂಜೆ ಆರು ಗಂಟೆ ಗೆ ಪಾವಗಡ ಬಿಟ್ಟು ಮಧ್ಯರಾತ್ರಿ‌ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.

ದಯಾನಂದ್ ಎಂಬಾತ ಹೀಗೆ ಪಾವಗಡದಿಂದ ಎತ್ತಿನಗಾಡಿಯಲ್ಲಿ ಬಂದಿರೋ ಅಭಿಮಾನಿ. ಶಿವಣ್ಣ ಅವರನ್ನು ಭೇಟಿ ಮಾಡಬೇಕು. ಅಣ್ಣನ್ನ ನಾವು ಕಳೆದುಕೊಂಡಿದೀವಿ ಶಿವಣ್ಣರನ್ನ ಮಾತಾಡಿಸಬೇಕು ಎಂದು ಆ ಅಭಿಮಾನಿ‌ ಮನವಿ ಮಾಡಿಕೊಂಡಿದ್ದಾನೆ.

ಅಪ್ಪು ಸರ್ ರೈತರಿಗೆ ತುಂಬಾ ಸಹಾಯ ಮಾಡಿದ್ದಾರೆ ಆಗಾಗಿ ಎತ್ತಿನಗಾಡಿಲಿ ದರ್ಶನಕ್ಕೆ ಬಂದೆ. ಮೂರು ದಿನದಿಂದ ಊಟ ಮಾಡಿಲ್ಲ, ನಿದ್ದೆ ಮಾಡಿಲ್ಲ ಬೇಸಾಯ ಮಾಡಿಲ್ಲ. ಅಪ್ಪು ಸರ್ ಇಲ್ಲ ಅನ್ನೋ ನೋವು ತುಂಬಾ ಕಾಡ್ತಿದೆ ಎಂದು ಆ ಅಭಿಮಾನಿ ನೋವು ತೋಡಿಕೊಂಡಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

error: Content is protected !!