ಯಾದವನಂದ ಶ್ರೀಗಳಿಗೆ ಅಯೋಧ್ಯೆ ಮಂತ್ರಾಕ್ಷತೆ ನೀಡಿ ಆಶೀರ್ವಾದ ಪಡೆದ ಬಿಜೆಪಿ ಮುಖಂಡರು

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 02 : ನಗರದ ಶ್ರೀ ಯಾದವನಂದ ಮಠಕ್ಕೆ ನಿನ್ನೆ ಸಂಜೆ ಭೇಟಿ ನೀಡಿದ ಮಂತ್ರಾಕ್ಷತೆ ಕಾರ್ಯಕ್ರಮದ ಪದಾಧಿಕಾರಿಗಳು  ಅಯೋಧ್ಯೆಯಿಂದ ಪ್ರಭು ಶ್ರೀ ರಾಮನಿಗೆ ಪೂಜಿಸಿದ ಪವಿತ್ರ ಮಂತ್ರಾಕ್ಷತೆ ಹಾಗೂ ಶ್ರೀರಾಮ ಮಂದಿರದ ಉದ್ಘಾಟನೆಯ ಕರಪ್ರತಿ ಪತ್ರಿಕೆಯನ್ನು ಯಾದವ ಸಂಸ್ಥಾನ ಮಠದ  ಶ್ರೀ ಯಾದವನಂದ ಮಹಾಸ್ವಾಮಿಗಳಿಗೆ ನೀಡಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರು ಮಂತ್ರಾಕ್ಷತೆ ಕಾರ್ಯಕ್ರಮದ ಜಿಲ್ಲಾ ತಂಡದ ಪ್ರಮುಖರಾದ ಜಿ.ಎಸ್ ಅನಿತ್ ಕುಮಾರ್, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, , ಬಿಜೆಪಿ ಯುವ ಮುಖಂಡ ರಘು ಚಂದನ್  , ಜಿಲ್ಲಾ ಪ್ರಚಾರಕರಾದ ಶ್ರೀನಾಥ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಎಬಿವಿಪಿ ಜಿಲ್ಲಾ  ಸಂಚಾಲಕರಾದ ಡಾ. ಲೇಪಾಕ್ಷ, ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥರಾದ ನಾಗೇಶ್ ಜಿ, ಜಿಲ್ಲಾ ತಂಡದ ಪ್ರಮುಖರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks