Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತನಿಷಾ – ಸಂತೋಷ್ ನಡುವೆ ಹೊತ್ತಿಕೊಳ್ತು ಬೆಂಕಿ : ನಮ್ರತಾಗೆ ಫುಲ್ ಖುಷಿ

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಮನೆಯಿಂದ ಯಾರೂ ಹೊರ ಹೋಗಬಹುದು ಎಂಬ ಊಹೆ ಜೋರಾಗಿದೆ. ಯಾರೂ ಹೋರ ಹೋಗುತ್ತಾರೆ ಎಂಬ ಲೆಕ್ಕಚಾರವೇ ಟಫ್ ಆಗಿ ಕಾಣಿಸುತ್ತಿದೆ. ಇದರ ನಡುವೆ ಒಬ್ಬರ ಮೇಲೊಬ್ಬರ ಮನಸ್ತಾಪ ಜೋರಾಗುತ್ತಿದೆ.

https://www.instagram.com/reel/C0bLS_Qs8Qn/?igshid=MzRlODBiNWFlZA==

ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಒಂದು ಲವ್ ಬರ್ಡ್ಸ್ ಹುಟ್ಟಿಕೊಳ್ಳುತ್ತಿದೆ. ಅದು ತನಿಷಾ ಹಾಗೂ ವರ್ತೂರು ಸಂತೋಷ್. ಇಬ್ಬರ ನಡುವೆ ಏನೋ ನಡೆಯುತ್ತಾ ಇದೆ ಎಂದೇ ಎಲ್ಲರು ರೇಗಿಸುವುದಕ್ಕೆ ಶುರು ಮಾಡಿದ್ದಾರೆ. ವರ್ತೂರು ಸಂತೋಷ್ ಕೂಡ ಅದಕ್ಕೆ ಹೌದು ಎಂಬಂತೆ ಸ್ಪಂದಿಸುತ್ತಾರೆ. ಅದಕ್ಕೆ ಬಿಗ್ ಬಾಸ್ ಬೆಂಕಿ ಎಂಬ ಸಿನಿಮಾದ ಪೋಸ್ಟರ್ ಅನ್ನೇ ರಿಲೀಸ್ ಮಾಡಿದ್ದರು. ನಿನ್ನೆ ಕಿಚ್ಚನ ಪಂಚಾಯ್ತಿಯಲ್ಲೂ ತನಿಷಾ ಇಲ್ಲದ ಮನ ಹೇಗಿರುತ್ತೆ ಅಂತ ಹೇಳಿದ್ದರು. ಆದರೆ ಒಂದೇ ದಿನಕ್ಕೆ ಆ ಭಾವನೆ ಉಲ್ಟಾ ಆಗಿದೆ. ವರ್ತೂರು ಸಂತೋಷ್, ತನಿಷಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇಂದು ನಾಮಿನೇಷನ್ ಮಾಡುವ ಅವಾಕಾಶವನ್ನು ಕ್ಯಾಪ್ಟನ್ ಆದಂತ ಸ್ನೇಹಿತ್ ಅವರಿಗೆ ಮಾತ್ರ ನೀಡಲಾಗಿದೆ. ಈ ವೇಳೆ ಎಲ್ಲರೂ ಅವರವರ ಬಗ್ಗೆ ಸ್ನೇಹಿತ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್, ತನಿಷಾಗೋಸ್ಕರ ಮನವಿ ಮಾಡಿಕೊಂಡರು. ತನಿಷಾ ಸೇಫ್ ಆಗಲಿ ಎಂದರು. ಅದೇ ಕ್ಷಣಕ್ಕೆ ವರ್ತೂರು ಸಂತೋಷ್, ಇಲ್ಲಿ ತ್ಯಾಗಮೂರ್ತಿಗಳಾಗಿ ನಾವೂ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕು ಅಂತ ಹೋಗಿ ತಳ್ಳಿಲ್ಲ. ಹೀಗಾಗಿ ತನಿಷಾಗೆ ಒಂದು ಚಾನ್ಸ್ ಸಿಗಲಿ ಅಂತ ಕೇಳಲ್ಲ. ನಾವೂ ಮಾನವೀಯತೆ ಅಂತ ಹೋದರೆ ಹಿಂದೆ ಅಲ್ಲ ಮುಂದೆಯೇ ತೋಡಿರುತ್ತಾರೆ ಹಳ್ಳ ಎಂದಿದ್ದಾರೆ.

ಈ ಮಾತು ಕೇಳಿ ನಮ್ರತಾ ಫುಲ್ ಖುಷಿ ಪಟ್ಟಿದ್ದಾರೆ. ಆಗ ಅಲ್ಲಿಯೇ ಕೂತಿದ್ದ ತನಿಷಾ, ಈಗ ಮಾತನಾಡಿರುವ ವರ್ತೂರ್ ಡೇ ಒನ್ ನಿಂಸ ಮಾತನಾಡಿದ್ದರೆ ಮೆಚ್ಚಿಕೊಳ್ಳಿತ್ತಾ ಇದ್ದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!