Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸುಮಲತಾರನ್ನೇ ಮದ್ವೆ ಆಗ್ತೀನಿ ಅಂತ ಹಠ ಮಾಡಿದ್ದರಂತೆ : ಅಪ್ಪು ನೆನೆದು ಸುಮಲತಾ ಕಣ್ಣೀರು..!

Facebook
Twitter
Telegram
WhatsApp

ಬೆಂಗಳೂರು: ಈ ವಿಚಾರ ಹೊಸದೇನಲ್ಲ. ಇದಕ್ಕೂ ಮುನ್ನ ಸಾಕಷ್ಟು ಬಾರಿ ಕೇಳಿದ್ದೇವೆ. ಅಪ್ಪುಗೆ ಸುಮಲತಾ ಕಂಡ್ರೆ ಪಂಚ ಪ್ರಾಣ. ನಟಿಯರಲ್ಲಿ ಅವರೆಂದರೆ ಇಷ್ಟ. ಅಪ್ಪನ ಜೊತೆ ಶೂಟಿಂಗ್ ಹೋಗುವಾಗ ಸುಮಲತಾರನ್ನ ನೋಡಿ, ಮನೆಗೆ ಬಂದು ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಅಂತ ಹಠ ಮಾಡಿದ್ದರಂತೆ. ಇದೇ ವಿಚಾರವನ್ನ ನೆನೆದು ಸಂಸದೆ, ನಟಿ ಸುಮಲತಾ ಕಣ್ಣೀರು ಹಾಕಿದ್ದಾರೆ.

ಅಪ್ಪು ಈ ಭೂಮಿ ಮೇಲೆ ಇನ್ನು ಜೀವಂತವಾಗಿಲ್ಲ ಅನ್ನೋದನ್ನ ಯಾರಿಗಾದ್ರೂ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾ..? ಅದೆಷ್ಟೇ ಪ್ರಯತ್ನ ಪಟ್ಟರು, ಇದುವೇ ಸತ್ಯ ಅಂತ ಒತ್ತಿ ಒತ್ತಿ ಹೇಳಿದ್ರು ಅದನ್ನ ಅರಗಿಸಿಕೊಳ್ಳೋದಕ್ಕೆ ಸಾಧ್ಯವೇ ಆಗ್ತಿಲ್ಲ. ಇನ್ನು ಇಡೀ ಚಿತ್ರರಂಗಕ್ಕೆ ಇದು ಯಾವತ್ತಿಗೂ ಭರಿಸಲಾರದ ನಷ್ಟ.

ಸಾಯುವ ಹಿಂದಿನ ದಿನ ಇದೇ ಸುಮಲತಾ ಅವರಿಗಾಗಿ ಹಾಡನ್ನ ಹಾಡಿದ್ದಾರೆ. ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ. ಅಲ್ಲಿಯೂ ನಾಳೆ ನಾನಿರೋದಿಲ್ಲ ಅನ್ನೋ ಸುಳಿವು ಸಿಕ್ಕಿಲ್ಲ. ಎಲ್ಲರೊಂದಿಗೆ ನಗು ನಗುತ್ತಿದ್ದ ದಿನ ಕಳೆದು ಬೆಳಗಾದ ಮೇಲೆ ಎಲ್ಲರನ್ನ ಬಿಟ್ಟು ಅರೆಕ್ಷಣಕ್ಕೆ ಹೊರಟೋಗಿದ್ದಾರೆ.

ನಿನ್ನೆವರೆಗೂ ಎಲ್ಲ ಕಡೆ ಓಡಾಡಿಕೊಂಡಿದ್ದವರು ಇಂದು ಇಲ್ಲ ಅಂದ್ರೆ ಹೇಗೆ ನಂಬೋದು ಅಂತ ಸುಮಲತಾ ದುಃಖ ತಪ್ತರಾಗಿದ್ದಾರೆ. ನಾನು ಶೂಟಿಂಗ್ ನಲ್ಲಿದ್ದಾಗ ಪಾರ್ವತಮ್ಮ ಅವರ ಜೊತೆ 4 ವರ್ಷದ ಬಾಲಕ ಶೂಟಿಂಗ್ ಬರೋನು. ಆಗ ನನ್ನ ನೋಡಿ ಮನೆಗೆ ಹೋದಾಗ ನಾನು ಸುಮಲತಾ ಅವ್ರನ್ನೆ ಮದುವೆಯಾಗೋದು ಅಂತ ಹಠ ಮಾಡಿದ್ದನಂತೆ. ರಾಜ್ ಕುಮಾರ್ ಅವರೇ ನನಗೆ ಇದನ್ನ ಹೇಳಿದ್ರು.

ಶೂಟಿಂಗ್ ನಲ್ಲಿ ಕಣ್ಣಾ ಮುಚ್ಚಾಲೇ ಆಡ್ತಿದ್ವಿ, ಹರಟೆ ಹೊಡೆಯುತ್ತಿದ್ವಿ. ಅಪ್ಪು ಯಾವತ್ತು ಆರೋಗ್ಯ ಸರಿಯಿಲ್ಲ ಅಂತ ಶೂಟಿಂಗ್ ನಿಲ್ಲಿಸಿದವರಲ್ಲ. ಆತನ ನಡವಳಿಕೆ ನೋಡ್ತಿದ್ರೆ ಈತ ನಮ್ಮ ಮನೆಯ ಹುಡುಗನೇ ಅಂತ ಎಲ್ಲರಿಗೂ ಅನ್ನಿಸ್ತಾ ಇತ್ತು. ಆದ್ರೆ ಇವತ್ತು ಅಪ್ಪು ಇಲ್ಲ ಅಂತ ಕಣ್ಣೀರು ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!