Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯತ್ನಾಳ್ ಹೊಡೆತಕ್ಕೆ ಬೊಮ್ಮಾಯಿ, ಬಿಎಸ್ವೈ ತಡ್ಕೋಳಲ್ಲ – ಕೃಷಿ ಸಚಿವ ಚೆಲುವರಾಯಸ್ವಾಮಿ

Facebook
Twitter
Telegram
WhatsApp

ಚಿತ್ರದುರ್ಗ : ಕಾಂಗ್ರೆಸ್ ಸರಕಾರ RSS ನ್ನು ತಾಕತ್ತಿದ್ರೆ ಮುಟ್ಟಲಿ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯಸ್ವಾಮಿ ಅವರು, RSS ನ್ನು ನಾವು ಬ್ಯಾನ್ ಮಾಡುತ್ತೇವೆ ಎಂದು ನಾವುಗಳು ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕ ಹಾನಿ‌ ಮಾಡಿದ ಸಂಘ ಯಾವುದೇ ಇದ್ರೂ ಕ್ರಮ ಅಂತಾ ಹೇಳೀದ್ದಿವಿ ಎಂದಿದ್ದಾರೆ.

ಕಾಂಗ್ರೆಸ್ ನವರು ಬಚ್ಚಾಗಳು ಎಂಬ ಆರ್. ಅಶೋಕ್ ಹೇಳಿಕೆಗೆ ಕಿಡಿ ಕಾರಿದ ಕೃಷಿ ಸಚಿವರು ನಾವೆಲ್ಲ ಬಚ್ಚಾಗಳಾ ? ಸರಿಯಪ್ಪಾ ಸಾಮ್ರಾಟ್ ನಿನಗೆ ತುಂಬಾ ಧನ್ಯವಾದಗಳು. ನಮ್ಮನ್ನೆಲ್ಲ ಭಸ್ಮ ಮಾಡೋ ಶಿವನ ಶಕ್ತಿಯಲ್ಲ ಅಶೋಕ್ ತೆಗೆಕೊಂಡಿದ್ದಾರೆ. ಈಗ ಬ್ರಹ್ಮ, ವಿಷ್ಣು, ಮಹೇಶ್ವರ ಯಾರು ಗೊತ್ತಿಲ್ಲ ಟೈಮ್ ಬರಲಿ ಕಾದು ನೋಡೋಣ ಬಿಡಿ ಎಂದರು.

ಚಿತ್ರದುರ್ಗ ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಹೊಡೀತೀಯಾ ಹೊಡಿ ಅಂತಾ ಬರ್ತಾರಲ್ಲ. ಅವರೆಲ್ಲ ಹೊಡಿಯಲ್ಲ, ಆರತ ಇವರ ಪರಿಸ್ಥಿತಿ ಆಗಿದೆ. ಬಿಜೆಪಿಯವರಿಗೆ ಏನೂ ಸಿಗ್ತಿಲ್ಲ, ಅದಕ್ಕೆ ಒಂದೇನಾದ್ರೂ ಹುಡುಕಕ್ಕೆ ಹೋಗ್ತಿದ್ದಾರೆ ಅಷ್ಟೇ, ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡೋಕೆ ಇವರಿಗೆ 6 ತಿಂಗಳು ಬೇಕಾಯ್ತು, ಇವರಿಬ್ಬರ ಸ್ಥತಿ ಈ ಪಾರ್ಲಿಮೆಂಟ್ ಚುನಾವಣೆ ಮುಗಿಲೀ ಗೊತ್ತಾಗುತ್ತೆ ಎಂದರು.

ರಾಜ್ಯದಲ್ಲಿ ಬರಘೋಷಿಸಿದ ನಂತರ ಪರಿಹಾರ ನೀಡುವ ಕಾರ್ಯದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಬೆಳೆಗಳ ಕ್ರಾಪ್ ಸರ್ವೆ ಮುಗಿದು ಅಂತಿಮ ಹಂತದಲ್ಲಿದ್ದು, ಈ ಕುರಿತು ಕೇಂದ್ರಕ್ಕೆ ಸಾಕಷ್ಟು ಒತ್ತಡ ತಂದಿದ್ದೀವಿ ಶೀಘ್ರದಲ್ಲೇ 226 ತಾಲೂಕುಗಳಲ್ಲಿ ಬರ ಪರಿಹಾರ ನೀಡಲಾಗುವುದು ಎಂದರು. ಬೆಳೆ ಪರಿಹಾರ ವಿಚಾರವಾಗಿ ನಾನು, ಸಚಿವ ಪ್ರಯಾಂಕ ಖರ್ಗೆ, ಕೃಷ್ಣಭೈರೇಗೌಡ್ರು ಮುಖ್ಯಮಂತ್ರಿಗಳನ್ನು ಬೇಟಿ ಮಾಡೋಕೆ ಹೋಗಿದ್ವಿ, ಆದರೆ ಭೇಟಿಗೆ ಅವಕಾಶ ನೀಡದ ಹಿನ್ನೆಲೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದೇವೆ. ಈಗಾಗಲೇ ಹಲವು ಮೆಮೋರಂಡಮ್ ಹಾಗೂ ಪತ್ರ ಬರೆದಿದ್ದೀವಿ ಅಂತಿಮವಾಗಿ ಪ್ರೋಸೆಸ್ ಆಗಿ ಒಂದು ಹಂತಕ್ಕೆ ಬಂದಿದೆ. ನಾವು ಕೊಟ್ಟ ಮೆಮೋತಂಡಮ್ ಗೆ ಇನ್ನೂ ಪತ್ರ ಬಂದಿಲ್ಲ. ನಿನ್ನೆ ರಾತ್ರಿ ಈ ಕುರಿತಂತೆ ನನಗೆ ಮಾಹಿತಿ ಬಂದಿದೆ. ಸಮಯ ಫಿಕ್ಸ್ ಆದ್ರೆ ನಾನು, ಕೃಷ್ಣಭೈರೇಗೌಡ್ರು ಹೋಗುತ್ತವೆ. ಫೈನಾನ್ಸ್ ಮಿನಿಸ್ಟರ್ ಹಂತಕ್ಕೆ ಹೋಗಿದೆ ಅಂದ್ರೆ ಇಂದು ಅಂತಿಮ ಮಾಡಲಾಗುತ್ತದೆ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!