ಬಿಗ್ ಬಾಸ್ ಸೀಸನ್ 10ರಲ್ಲಿ ರೈತನಾಗಿ ವಿಶೇಷವಾಗಿ ಗಮನ ಸೆಳೆದವರು ವರ್ತೂರು ಸಂತೋಷ್. ತಾನೂ ಸಾಕುತ್ತಿರುವ ಹಳ್ಳಿಕಾರ್ ತಳಿಗಳಿಂದಾನೇ ಖ್ಯಾತಿ ಪಡೆದು, ಬಿಗ್ ಬಾಸ್ ಮನೆಗೆ ಬಂದರು. ಅಲ್ಲಿ ಮೈತುಂಬಾ ಆಭರಣ ಹಾಕಿಕೊಂಡು, ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸದ್ಯ ಜಾಮೀನ ಮೇಲೆ ರಿಲೀಸ್ ಆಗಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದಾರೆ.
https://fb.watch/o0lwv13Eni/?mibextid=Nif5oz
ಈಗಾಗಲೇ ಬಿಗ್ ಬಾಸ್ ಮನೆ ಮಂದಿಗೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ಮನೆ ಮಂದಿ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಒಡವೆಗಳೆಲ್ಲಾ ಹೋಗಿ ಬಿಡ್ತಾ ಎಂದು ನಮ್ರತಾ ಶಾಕಿಂಗ್ ನಲ್ಲಿ ಕೇಳಿದ್ದಾರೆ. ಎಲ್ಲರ ಪ್ರಶ್ನೆಗಳಿಗೂ ಕೊಂಚ ಸೈಲೆಂಟ್ ಆಗಿ ಆಮೇಲೆ ಉತ್ತರಿಸಿದ್ದಾರೆ.
ಆದರೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವ ಸಮಯದಲ್ಲಿ ಎಲ್ಲರೂ ವರ್ತೂರು ಸಂತೋಷ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಯಾಕಂದ್ರೆ ಒಂದು ವಾರಗಳ ಕಾಲ ವರ್ತೂರು ಸಂತೋಷ್ ಯಾವುದೇ ಆಟದಲ್ಲೂ ಇರಲಿಲ್ಲ. ಹೀಗಾಗಿ ಎಲ್ಲರೂ ವರ್ತೀರ್ ಸಂತೋಷ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಮನೆ ಮಂದಿಯಿಂದ ನಾಮಿನೇಟ್ ಆಗಿರುವ ಸಂತೋಷ್, ಜನರಿಂದ ಸೇಫ್ ಆಗುವ ಎಲ್ಲಾ ಸಾಧ್ಯತೆಗಳಂತು ಇದ್ದೆ ಇದೆ. ಆದರೆ ಈ ವಾರದಿಂದ ಎಲಿಮಿನೇಷನ್ ಟಫ್ ಆಗುತ್ತಾ ಬರುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















