Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ : ಬಂದೊಡನೆ ಗೆಟೌಟ್ ಅಂತಿದ್ದಾರೆ ಮನೆ ಮಂದಿ..!

---Advertisement---

 

ಬಿಗ್ ಬಾಸ್ ಸೀಸನ್ 10ರಲ್ಲಿ ರೈತನಾಗಿ ವಿಶೇಷವಾಗಿ ಗಮನ ಸೆಳೆದವರು ವರ್ತೂರು ಸಂತೋಷ್. ತಾನೂ ಸಾಕುತ್ತಿರುವ ಹಳ್ಳಿಕಾರ್ ತಳಿಗಳಿಂದಾನೇ ಖ್ಯಾತಿ ಪಡೆದು, ಬಿಗ್ ಬಾಸ್ ಮನೆಗೆ ಬಂದರು. ಅಲ್ಲಿ ಮೈತುಂಬಾ ಆಭರಣ ಹಾಕಿಕೊಂಡು, ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸದ್ಯ ಜಾಮೀನ ಮೇಲೆ ರಿಲೀಸ್ ಆಗಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದಾರೆ.

https://fb.watch/o0lwv13Eni/?mibextid=Nif5oz

ಈಗಾಗಲೇ ಬಿಗ್ ಬಾಸ್ ಮನೆ ಮಂದಿಗೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ಮನೆ ಮಂದಿ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಒಡವೆಗಳೆಲ್ಲಾ ಹೋಗಿ ಬಿಡ್ತಾ ಎಂದು ನಮ್ರತಾ ಶಾಕಿಂಗ್ ನಲ್ಲಿ ಕೇಳಿದ್ದಾರೆ. ಎಲ್ಲರ ಪ್ರಶ್ನೆಗಳಿಗೂ ಕೊಂಚ ಸೈಲೆಂಟ್ ಆಗಿ ಆಮೇಲೆ ಉತ್ತರಿಸಿದ್ದಾರೆ.

ಆದರೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವ ಸಮಯದಲ್ಲಿ ಎಲ್ಲರೂ ವರ್ತೂರು ಸಂತೋಷ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಯಾಕಂದ್ರೆ ಒಂದು ವಾರಗಳ ಕಾಲ ವರ್ತೂರು ಸಂತೋಷ್ ಯಾವುದೇ ಆಟದಲ್ಲೂ ಇರಲಿಲ್ಲ. ಹೀಗಾಗಿ ಎಲ್ಲರೂ ವರ್ತೀರ್ ಸಂತೋಷ್ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಮನೆ ಮಂದಿಯಿಂದ ನಾಮಿನೇಟ್ ಆಗಿರುವ ಸಂತೋಷ್, ಜನರಿಂದ ಸೇಫ್ ಆಗುವ ಎಲ್ಲಾ ಸಾಧ್ಯತೆಗಳಂತು ಇದ್ದೆ ಇದೆ. ಆದರೆ ಈ ವಾರದಿಂದ ಎಲಿಮಿನೇಷನ್ ಟಫ್ ಆಗುತ್ತಾ ಬರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment