ನಾಳೆ ಚಿತ್ರದುರ್ಗದಲ್ಲಿ ಡಾ.ಸೈಯ್ಯದ್ ನಾಸಿರ್ ಹುಸೇನ್ ಸನ್ಮಾನ ಸಮಾರಂಭ

1 Min Read

 

ಸುದ್ದಿಒನ್, ಚಿತ್ರದುರ್ಗ: ಅಕ್ಟೋಬರ್.21: ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌, ಚಿತ್ರದುರ್ಗ ಎಂ.ಜಯಣ್ಣ ಸ್ಮಾರಕ ಚಾರಿಟೇಬಲ್ ಟ್ರಸ್ಟ್, ಚಿತ್ರದುರ್ಗ ವತಿಯಿಂದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ  ಹೆಚ್.ಆಂಜನೇಯ ರವರ ನೇತೃತ್ವದಲ್ಲಿ  ಅಕ್ಟೋಬರ್ 22 ಭಾನುವಾರ, ಬೆಳಿಗ್ಗೆ 10:30 ಗಂಟೆಗೆ  ನಗರದ ತ.ರಾ.ಸು ರಂಗಮಂದಿರದಲ್ಲಿ
ರಾಜ್ಯ ಸಭಾ ಸದಸ್ಯರು ಹಾಗೂ ಸಿ.ಡಬ್ಲ್ಯೂ,ಸಿ ಸದಸ್ಯ ಡಾ.ಸೈಯ್ಯದ್ ನಾಸಿರ್ ಹುಸೇನ್ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ ಖರ್ಗೆ,ಡಿ.ಸುಧಾಕರ್, ನಾಗೇಂದ್ರ,ಕೆಪಿಸಿಸಿ ಕಾರ್ಯಾಧ್ಯಕ್ಷ  ಬಿ.ಎನ್.ಚಂದ್ರಪ್ಪ ಹಾಗೂ ಶಾಸಕರಾದ ಅಬ್ದುಲ್‌ ಜಬ್ಬಾರ್, ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವೀರೇಂದ್ರ ಪಪ್ಪಿ,ಎನ್.ವೈ.ಗೋಪಾಲ ಕೃಷ್ಣ,  ಕೆ.ಎಸ್.ಬಸವಂತಪ್ಪ,  ಕೆಪಿಸಿಸಿ ಸಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ ಪೀರ್  ಸೇರಿದಂತೆ ಅನೇಕ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks