Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 13 ರಂದು ಅದ್ದೂರಿಯಾಗಿ ರಾಜ ವೀರ ಮದಕರಿ ನಾಯಕ ಜಯಂತೋತ್ಸವ ಆಚರಣೆ : ಬಿ.ಕಾಂತರಾಜ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಸೆ.22) :  ಅಕ್ಟೋಬರ್ 13 ರಂದು ರಾಜ ವೀರ ಮದಕರಿ ನಾಯಕರವರ ಜಯಂತೋತ್ಸವವನ್ನು ಆಚರಣೆ ಮಾಡಲು ನಾಯಕ ಸಮಾಜ ತೀರ್ಮಾನ ಮಾಡಲಾಗಿದೆ ಎಂದು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷರಾದ ಬಿ.ಕಾಂತರಾಜ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆವಿಗೂ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದ ಮದಕರಿ ನಾಯಕರ ಜಯಂತೋತ್ಸವವನ್ನು ಈ ಸಾಲಿನಿಂದ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಅಂದು ಮೆರವಣಿಗೆಯನ್ನು ಮಾಡುವುದರ ಮೂಲಕ ಮದಕರಿ ನಾಯಕರ ಜಯಂತೋತ್ಸವವನ್ನು ನಡೆಸಲಾಗುವುದು. ಇದು ಪ್ರಾರಂಭೀಕವಾಗಿ ಚಿತ್ರದುರ್ಗದಲ್ಲಿ ನಡೆಸಲಾಗುತ್ತಿದೆ ಮುಂದಿನ ದಿನಮಾನದಲ್ಲಿ ರಾಜ್ಯವ್ಯಾಪ್ತಿ ಹಬ್ಬಲಿದೆ ಎಂದರು.

ಮದಕರಿನಾಯಕರ ಜಯಂತೋತ್ಸವದ ಅಂಗವಾಗಿ ನೂತನವಾಗಿ ಮದಕರಿನಾಯಕರ ಭಾವಚಿತ್ರವನ್ನು ಮುಂದಿನ ದಿನದಲ್ಲಿ ಬೀಡುಗಡೆ ಮಾಡಲಾಗುವುದು. ಇದಕ್ಕೆ ತಯಾರಿ ನಡೆಯುತ್ತಿದೆ ಈ ಸಂಬಂದ ಇತಿಹಾಸ ಸಂಶೋಧಕರಾದ ಲಕ್ಷ್ಮಣ್ ತೆಲಗಾವಿ ಮತ್ತು ಬಿ.ರಾಜಶೇಖರಪ್ಪ ರವರ ಜೊತೆ ಹಲವಾರು ಬಾರಿ ಮಾತನಾಡಿದ್ದು ಕ್ರಿಯೇಟಿವ್ ವೀರೇಶ್ ರವರಿಂದ ರೇಖಾ ಚಿತ್ರವನ್ನು ತಯಾರು ಮಾಡಲಾಗುತ್ತಿದೆ. ನಮ್ಮ ಜಯಂತೋತ್ಸವದಲ್ಲಿ ಈ ಚಿತ್ರವನ್ನೆ ಇಡಲಾಗುವುದು ಇದು ಮುಂದಿನ ದಿನಮಾನದಲ್ಲಿ ರಾಜ್ಯಾವ್ಯಾಪ್ತಿ ಈ ಚಿತ್ರವೇ ಪ್ರಚಾರಕ್ಕೆ ಬರಬಹುದು ಎಂದು ಕಾಂತರಾಜ್ ತಿಳಿಸಿದರು.

ಮದಕರಿನಾಯಕರ ಮೇ 15 ರಂದು ಜಯಂತಿ ನಡೆಯಲ್ಲಿದ್ದು ಅಂದು ವೇದಿಕೆ ಕಾರ್ಯಕ್ರಮ ನಡೆಯಲಿದೆ ಅ. 15 ರಂದು ನಡೆಯುವ ಜಯಂತೋತ್ಸವದಲ್ಲಿ ವೇದಿಕೆ ಕಾರ್ಯಕ್ರಮ ಇರದೇ ಬರೀ ಮೆರವಣಿಗೆ ಮಾತ್ರ ನಡೆಯಲಿದೆ ಎಂದ ಕಾಂತರಾಜ್, ಈ ಕಾರ್ಯಕ್ರಮದಲ್ಲಿ ಡಿಜೆಯನ್ನು ಬಳಕೆ ಮಾಡಿಕೊಳ್ಳಲಾಗುವುದು ಜೊತೆಗೆ ವಿವಿದ ಕಲಾತಂಡಗಳು ಸಹಾ ಭಾಗವಹಿಸಲಿವೆ ಎಂದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಅ.13ರ ಕಾರ್ಯಕ್ರಮವನ್ನು ಯಾರಿಂದ ಉದ್ಘಾಟನೆ ಮಾಡಿಸಬೇಕೆಂಬುದನ್ನು ಸಮಾಜದ ಮುಖಂಡರು ತೀರ್ಮಾನವನ್ನು ಮುಂದಿನ  ದಿನಮಾನದಲ್ಲಿ ಮಾಡಲಾಗುವುದು ಅಲ್ಲದೆ ಅಂದಿನ ಕಾರ್ಯಕ್ರಮಕ್ಕೆ ಮಠಾಧೀಶರು ಸಹಾ ಭಾಗವಹಿಸಲಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ಮುಂದಿನ  ದಿನದಲ್ಲಿ ನೀಡಲಾಗುವುದು ಎಂದರು.

ಗೋಷ್ಟಿಯಲ್ಲಿ ನಾಯಕ ಸಮಾಜದ ಗೋಪಾಲಸ್ವಾಮಿ ನಾಯಕ್, ಸೋಮು, ಸ್ವಾಮಿ, ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!