ತಿರುಪತಿ ತಿಮ್ಮಪ್ಪನ ಮೊರೆ ಹೋದ ಶಾರುಖ್ ಖಾನ್ : ಕಾರಣ ಏನು ಗೊತ್ತಾ..?

ತಿರುಪತಿ ತಿಮ್ಮಪ್ಪನನ್ನು ನಂಬಿಕೊಂಡರೆ ಎಲ್ಲವೂ ಸಕ್ಸಸ್ ಆಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂದ್ರಯಾನ 3 ಉಡಾವಣೆಯ ವೇಳೆಯೂ ತಿರುಪತಿ‌ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿಸಿದ್ದರು. ಅದು ಯಶಸ್ಸು ಕೂಡ ಆಯ್ತು. ಇದೀಗ ಶಾರುಖ್ ಖಾನ್ ಕೂಡ ಸಕ್ಸಸ್ ಗಾಗಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಜವಾನ್ ಸಿನಿಮಾದ ಯಶಸ್ಸಿಗಾಗಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.

ಸೆಪ್ಟೆಂಬರ್7 ರಂದು ಜವಾನ್ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶಾರುಖ್ ಖಾನ್ ಮತ್ತು ತಂಡ, ತಿಮ್ಮಪ್ಪನ ದರ್ಶನವನ್ನು ಪಡೆದಿದ್ದಾರೆ. ನಟ ಶಾರುಖ್ ಖಾನ್, ಸುಹಾನ್ ಖಾನ್, ನಟಿ ನಯನಾ ತಾರಾ ದಂಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದು, ಸಿನಿಮಾ ಗೆಲುವಿಗಾಗಿ ಬೇಡಿಕೊಂಡಿದ್ದಾರೆ.

ಜವಾನ್ ಸಿನಿಮಾ ಸಾಕಷ್ಟು ಭರವಸೆ ಹುಟ್ಟುಹಾಕಿದೆ. ಪಠಾಣ್ ಬಳಿಕ ಶಾರುಖ್ ಖಾನ್ ಗೆ ಸಕ್ಸಸ್ ತಂದುಕೊಡಲಿರುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇತ್ತಿಚೆಗೆ ಸಿನಿಮಾ ಪ್ರಚಾರದ ವೇಳೆ ಶಾರುಖ್ ಖಾನ್ ನಡೆದುಕೊಂಡ ರೀತಿಯೂ ವೈರಲ್ ಆಗಿತ್ತು. ನಿರ್ದೇಶಕ ಅಟ್ಲು ಅವರ ತಾಯಿ ವೇದಿಕೆ ಮೇಲೆ ಬಂದಾಗ, ಅವರ ಕಾಲು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದರು. ಬಳಿಕ ನಟಿ ನಯನತಾರಾ ಕೂಡ ಆಶೀರ್ವಾದ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *