ದರ್ಶನ್ ಮತ್ತು ಸುದೀಪ್‌ ಮತ್ತೆ ಸರಿ ಆಗ್ತಾರಾ ..? ಬರ್ತ್ ಡೇ ಖುಷಿಯಲ್ಲಿ ಕಿಚ್ಚ ಹೇಳಿದ್ದೇನು..?

1 Min Read

ಲಕ್ಷಾಂತರ ಅಭಿಮಾನಿಗಳ ಆಸೆ ಇದು. ಕಿಚ್ಚ – ದಚ್ಚು ಆದಷ್ಟು ಬೇಗ ಸರಿಯಾಗಲಿ ಎಂಬುದು. ಅದಕ್ಕೆ ತಕ್ಕಂತೆ ಇತ್ತಿಚೆಗೆ ಒಂದು ಬೆಳವಣಿಗೆಯೂ ನಡೆದಿತ್ತು. ಸುಮಲತಾ ಅವರ ಹುಟ್ಟುಹಬ್ಬಕ್ಕೆ ಜೊತೆಯಾಗಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಅಂದಿನಿಂದ ಇಬ್ಬರು ಒಂದಾಗುತ್ತಾರೆ ಎಂಬ ನಿರೀಕ್ಷೆಯೂ ಎಲ್ಲರಲ್ಲೂ ಹುಟ್ಟಿತ್ತು. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಅದಕ್ಕೊಂದು ಕ್ಲಾರಿಟಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

ನಿನ್ನೆ ರಾತ್ರಿಯಿಂದ ಕಿಚ್ಚ ಸುದೀಪ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಜೆಪಿ‌ ನಗರದ ನಿವಾಸದಲ್ಲಿ ಮಾತನಾಡಿದ್ದು, ದರ್ಶನ್ ಮತ್ತು ಮಾಧ್ಯಮದವರ ನಡುವೆ ಎಲ್ಲವೂ ಸರಿಯಾಗಿದ್ದು ಖಂಡಿತ ಖುಷಿ ಆಯ್ತು. ಸಿನಿಮಾ ಸೋಲು, ಗೆಲುವಿನ ಬಗ್ಗೆ ಚರ್ಚೆಯಾಗಬೇಕು. ಆದರೆ ಆ ರೀತಿಯಾದಂತ ಬೆಳವಣಿಗೆ ನಡೆಯಬಾರದು. ಈಗ ದರ್ಶನ್ ಹಾಗೂ ನಿಮ್ಮ ನಡುವೆ ಎಲ್ಲವೂ ಸರಿಯಾಗಿದ್ದು ಖುಷಿ ತಂದಿದೆ.

ಸುಮಲತಾ ಅವರ ಬರ್ತ್ ಡೇ ಪಾರ್ಟಿಯಲ್ಲಿ ಸೇರಿದ್ದಕ್ಕೆ ನೀವೆಲ್ಲಾ ಎಲ್ಲಾ ಸರಿ ಆಗುತ್ತೆ ಎಂದೇ ಸುದ್ದಿ ಮಾಡಿದ್ರಿ. ನಾನು ಹಾಗೆಲ್ಲಾ ಎಲ್ಲೂ ಹೋಗಲ್ಲ. ಆದ್ರೆ ಸುಮಲತಾ ಅವರು 60ನೇ ವರ್ಷದ ಹುಟ್ಟುಹಬ್ಬ. ಅದೊಂದು ಸ್ಪೆಷಲ್. ನಂಗೂ ಗೊತ್ತಿತ್ತು ದರ್ಶನ್ ಅಲ್ಲಿ ಇರ್ತಾರೆ ಅಂತ. ಅವರು ಒಬ್ಬ ನಟ. ಗೌರವಿಸುತ್ತೇನೆ. ಆದ್ರೆ ಎಲ್ಲವೂ ಮೊದಲಿನಂತೆ ಆಗೋದಕ್ಕೆ ಸ್ವಲ್ಪ ಸಮಯ ಬೇಕು. ನನ್ನಲ್ಲೂ ಒಂದಷ್ಟು ಪ್ರಶ್ನೆಗಳಿವೆ. ಅವರಲ್ಲಿಯೂ ಒಂದಷ್ಟು ಪ್ರಶ್ನೆಗಳಿವೆ. ಅದಕ್ಕೆಲ್ಲ ಉತ್ತರ ಸಿಗಬೇಕು ಅಲ್ವಾ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *