ಸುದೀಪ್ ಬರ್ತ್ ಡೇಗೂ ಬರ್ಲಿಲ್ಲ ‘ಬಿಲ್ಲ ರಂಗ ಭಾಷಾ’ ಅಪ್ಡೇಟ್ ಕಾರಣ ಏನು ಗೊತ್ತಾ..?

1 Min Read

ಇಂದು ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಸಂಭ್ರಮ. 50 ವಸಂತಕ್ಕೆ ಕಾಲಿಟ್ಟಿದ್ದಾರೆ. ರಾತ್ರಿಯಿಂದಾನೇ ಕಿಚ್ಚನ ಹುಟ್ಟುಹಬ್ಬದ ಆಚರಣೆ ನಡೆದಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಜೋರು ಸೆಲೆಬ್ರೇಷನ್ ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಕೂಡ ಕಿಚ್ಚನ ಮನೆ ಬಳಿ ಅಭಿಮಾನಿಗಳ ಸಾಲುಗಟ್ಟಿ‌ ನಿಂತು ಶುಭ ಹಾರೈಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ತಂಡಗಳು ವಿಶೆಷ ಗಿಫ್ಟ್ ನೀಡುತ್ತವೆ. ಈ ಬಾರಿ ಬಿಲ್ಲ ರಂಗ ಭಾಷಾ‌ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದ್ರೆ ಆ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.

ಅನೂಪ್ ಬಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೂಡಿ ಬಂದಿತ್ತು. ಅದಾದ‌ ಮೇಲೆ ಇದೇ ಕಾಂಬಿನೇಷನ್ ನಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾ ಬರುತ್ತೆ ಎಂಬ ವಿಚಾರ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಆದ್ರೆ ಅದರ ಅಪ್ಡೇಟ್ ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ ಅನೂಪ್ ಬಂಡಾರಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.


‘ನಾನು ನೀಡುವ ಅಪ್ಡೇಟ್ ಗಾಗಿ ನೀವೂ ಕಾಯುತ್ತಾ ಇದ್ದೀರಾ ಅಂತ ನನಗೆ ಗೊತ್ತು. ನಾನು ಕೂಡ ನಿಮ್ಮಂತೆ ಕುತೂಹಲ ಹೊಂದಿದ್ದೇನೆ. ಆದರೆ ಸುದೀಪ್ ನಟನೆಯ ಹಲವು ಸಿನಿಮಾಗಳು ನಡೆಯುತ್ತಿರುವುದರಿಂದ ನಮ್ಮ‌ ಸಿನಿಮಾದ ಅಪ್ಡೇಟ್ ಬೇಡ‌ ಎಂದು ನಮ್ಮ‌ ಸಿನಿಮಾ ತಂಡದವರು ನಿರ್ಧರಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *