Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದ್ವೇಷವನ್ನು ಪ್ರೀತಿಯಿಂದ ಗೆದ್ದಾಗ ಮಾತ್ರ ಸಮನ್ವಯ ಸಾಧ್ಯ : ಶ್ರೀಮತಿ ತಾರಿಣಿ ಶುಭದಾಯಿನಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆ.31 : ಸಮನ್ವಯ ಮನುಷ್ಯನ ವಿಕಾಸಕ್ಕೆ ಅನುಮಾಡಿಕೊಡುವುದರಿಂದ ಸಮನ್ವಯ ತತ್ವಗಳನ್ನು ವೈರುದ್ಯದ ನೆಲೆಯಲ್ಲಿ ನೋಡಬೇಕು ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ತಾರಿಣಿ ಶುಭದಾಯಿನಿ ಹೇಳಿದರು.

ಮುರುಘಾಮಠ ಬಸವಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯ ನಡೆಯುತ್ತಿರುವ ಶ್ರಾವಣ ಮಾಸದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮನ್ವಯ ದೃಷ್ಠಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಸಮನ್ವಯ ಎನ್ನುವ ಪದ ಬಳಕೆಯಲ್ಲಿದೆ. ತತ್ವವಿಚಾರಗಳು, ವೈರುದ್ಯಗಳಿಂದ ಸಮನ್ವಯ ಕೂಡಿದೆ. ತತ್ವ ಚಿಂತನೆ, ಜಿಜ್ಞಾಸೆಯಲ್ಲಿ ಸಮನ್ವಯ ಒಂದು. ಬುದ್ದ ವೈರುದ್ಯಗಳನ್ನು ನೀಗಿಕೊಳ್ಳಲು ಧ್ಯಾನ ಮಾಡುತ್ತ ಕುಳಿತ. ಮಧ್ಯಮ ಮಾರ್ಗ ಬುದ್ದ ಸಾಧಿಸಿದ ಸಮನ್ವಯ ತತ್ವ. ಸತ್ಯದ ದರ್ಶನ ಆಗಬೇಕು. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು. ಆಗ ಮಾತ್ರ ಸಮನ್ವಯ ಸಾಧಿಸಬಹುದು ಎಂದು ತಿಳಿಸಿದರು.

ಸಮತೋಲನ ಸಾಧಿಸುವುದು ದೊಡ್ಡ ಸವಾಲು ಎಂದು ಬುದ್ದ ಹೇಳಿದ್ದಾನೆ. ರಾಜಕೀಯ ಎನ್ನುವುದು ಮನೆ ಮನಗಳಲ್ಲಿ ಹೊಕ್ಕಿದೆ. ರಾಜಕೀಯಕ್ಕೂ ಮೋಕ್ಷ ಮಾರ್ಗಕ್ಕೂ ಯಾವ ರೀತಿ ಸಂಬಂಧ ಇದೆ ಎನ್ನುವುದನ್ನು ತೋರಿಸಿದವರು ಗಾಂಧಿ. ವಿರೋಧಾಭಾಸದ ಜೊತೆ ಗಾಂಧಿ ದೊಡ್ಡ ಸಮನ್ವಯಕಾರರಾಗಿ ಕೆಲಸ ಮಾಡಿದ್ದಾರೆ.

ವೈರುದ್ದಗಳು ಭಾರತದಲ್ಲಿ ಸರ್ವೆ ಸಾಮಾನ್ಯ. ಸಮನ್ವಯತೆ ಬೇಕು. ಅದೊಂದು ಶಕ್ತಿ. ಸಮನ್ವಯತೆ ಎನ್ನುವುದು ಮೌಲ್ಯ. ಅದನ್ನು ಗಾಂಧಿಯಲ್ಲಿ ಕಾಣಬಹುದು. ಸಂವಿಧಾನ ಕೂಡ ಸಮನ್ವಯಕಾರನ ರೂಪದಲ್ಲಿ ನಿಂತಿರುವ ದೊಡ್ಡ ಶಕ್ತಿ. ಸಮನ್ವಯ ಎನ್ನುವುದು ನಮ್ಮ ನಿಲುವಾಗಿರಬೇಕು. ಸಂವಿಧಾನವನ್ನು ಬಾಯಲ್ಲಿ ಪಠಿಸುತ್ತೇವೆ. ಯಾರು ಪಾಲನೆ ಮಾಡುತ್ತಿಲ್ಲ. ತಾಳ್ವಿಕೆ ಎಲ್ಲಿಯವರೆಗೂ ಜೀವನ ಮೌಲ್ಯವಾಗಿ ಬರುವುದಿಲ್ಲವೋ ಅಲ್ಲಿಯತನಕ ರಾಜಕೀಯ, ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎಂದರು.

ನಿಜವಾದ ಸಮನ್ವಯಕಾರರು ಒಳತಂತುಗಳಲ್ಲಿ ಬೆಸೆಯಬೇಕು. ಸಮನ್ವಯದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು. ತಿಪ್ಪೇರುದ್ರಸ್ವಾಮಿ ಮಾತನಾಡಿ ಯುಗ ಯುಗಗಳಿಂದಲೂ ಮಾನವ ಈ ಭೂಮಿ ಮೇಲೆ ಜೀವನ ನಡೆಸಿದ್ದಾನೆ. ಶ್ರೇಷ್ಠ-ಕನಿಷ್ಠ ಎನ್ನುವುದು ಕೇವಲ ಮನುಷ್ಯನಲ್ಲಿ ಅಲ್ಲ.

ಪ್ರಾಣಿ, ಪಕ್ಷಿಗಳಲ್ಲಿಯೂ ಇದೆ. ಸ್ತ್ರೀ-ಪುರುಷರ ನಡುವೆ ದೊಡ್ಡ ಕಂದಕವಿದೆ. ಸುಖ-ದುಃಖ, ಪಾಪ-ಪುಣ್ಯದ ನಡುವೆ ಸಮನ್ವಯತೆ ಬೇಕು. ಕಾಲ ನಿರ್ಣಯವಿಲ್ಲದೆ ಯಾವ ಕಾರ್ಯವನ್ನು ಮನುಷ್ಯ ಮಾಡುತ್ತಿಲ್ಲ. ಅಷ್ಟೊಂದು ಮೂಢನಂಬಿಕೆಗೆ ಬಲಿಯಾಗಿದ್ದಾನೆ. ಆಧ್ಯಾತ್ಮ ಸಾಧಿಸಲು ಸಮನ್ವಯ ಅಡ್ಡ ಬರುವುದಿಲ್ಲ. ವಚನ ಚಳುವಳಿ ಹುಟ್ಟಿದ್ದೆ ಸಮನ್ವಯ ದೃಷ್ಠಿಯಿಂದ ಎಂದು ತಿಳಿಸಿದರು.

ಮುರುಘಾಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬಸವೇಶ್ವರ ಆಸ್ಪತ್ರೆಯ ಡಾ.ಪಾಲಾಕ್ಷ, ಲಾಯರ್ ವಿಶ್ವನಾಥ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

IPL 2024 : ಆರ್‌ಸಿಬಿ vs ಸಿಎಸ್‌ಕೆ : ಆರ್‌ಸಿಬಿಗೆ ಉಂಟು 18 ರ ನಂಟು : ಇಂದು ಇತಿಹಾಸ ಮರುಕಳಿಸುತ್ತಾ ?

ಸುದ್ದಿಒನ್ :  IPL 2024 ನಲ್ಲಿ RCB vs CSK ನಡುವಿನ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲಿದೆ. ಏಕೆಂದರೆ ಇಂದಿನ ಪಂದ್ಯ ನಾಕೌಟ್ ಪಂದ್ಯವಾಗಿದೆ.

ಚಿತ್ರದುರ್ಗ | ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಳೆ ವರದಿ

    ಚಿತ್ರದುರ್ಗ, ಮೇ.18:  ಶುಕ್ರವಾರ ಸಂಜೆ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 42.8ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-2ರಲ್ಲಿ 9.2ಮಿ.ಮೀ, ಭರಮಸಾಗರದಲ್ಲಿ 4.4ಮಿ.ಮೀ

error: Content is protected !!