ಬಿವೈ ರಾಘವೇಂದ್ರ ಮತ್ತೆ ಸಂಸದನಾಗಲು ನಾವೂ ಅವಕಾಶ ಕೊಡಲ್ಲ : ಕಾಂಗ್ರೆಸ್ ನಾಯಕ

suddionenews
1 Min Read

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ವಿರುದ್ಧ ಸೋತಿದ್ದ ನಾಗರಾಜು ಗೌಡ, ಇದೀಗ ಮತ್ತೆ ಹರಿಹಾಯ್ದಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರುವುದರ ಜೊತೆಗೆ ಕಾರ್ಯಕರ್ತರನ್ನು ಸೇರಿಸಿದರು. ಬಳಿಕ ಮಾತನಾಡಿದ ಅವರು, ಬಿವೈ ರಾಘವೇಂದ್ರ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪದೇ ಪದೇ ಶಿವಮೊಗ್ಗದ ಜನ ಮೋಸ ಹೋಗಲ್ಲ. ಮತ್ತೆ ಬಿವೈ ರಾಘವೇಂದ್ರ ಸಂಸದರಾಗಲ್ಲ. ಅದಕ್ಕೆ ನಾವೂ ಬಿಡುವುದಿಲ್ಲ. ಶಿಕಾರಿಪುರದಲ್ಲಿ ಕಳಪೆ ನೀರಾವರಿ ತನಿಖೆ ಮಾಡಿಸ್ತೀನಿ. ಬಿವೈ ರಾಘವೇಂದ್ರ ಪುನಃ ಸಂಸದನಾಗುವುದಿಲ್ಲ ಎಂದಿದ್ದಾರೆ.

ಪಕ್ಷವಿರೋಧಿ ಎಂದು ಉಚ್ಛಾಟಿತನಾಗಿದ್ದ ನನ್ನನ್ನ ಕಾಂಗ್ರೆಸ್ ಗೆ ಪುನಃ ಸೇರ್ಪಡೆ ಮಾಡಿರೋದು ನನಗೆ ಹೆಮ್ಮೆ ಇದೆ. ನಾನು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಶಿಕಾರಿಪುರದಲ್ಲಿ ಅತೀ ಕಡಿಮೆ ಮತದಲ್ಲಿ ಸೋತಿದ್ದೆ. ಅವರು ಹಣದ ಹೊಳೆ ಹರಿಸಿದರೂ ಸಹ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ಕೆಲಸ ಮಾಡಿದ್ದರು. ಸರಿ ಸಮಾನ ವೋಟ್‌ಗಳನ್ನ ನನಗೆ ನೀಡಿದ್ದರು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *