Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಿರುಪತಿ ಬೆಟ್ಟ ಹತ್ತಲು ಜನರಲ್ಲಿ ಆತಂಕ : ಈಗ ಚಿರತೆ ಜೊತೆಗೆ ಕರಡಿಯೂ ಪ್ರತ್ಯಕ್ಷ..!

Facebook
Twitter
Telegram
WhatsApp

 

ಇತ್ತಿಚೆಗಷ್ಟೇ ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತುವುದಕ್ಕೆ ಹೋದಾಗ ಬಾಲಕಿಯನ್ನ ಚಿರತೆಯೊಂದು ಕೊಂದ ಘಟನೆ ನಡೆದಿದೆ. ಅದಾದ ಬಳಿಕ ಆ ಚಿರತೆಯನ್ನ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಇನ್ಮುಂದೆ ಚಿರತೆ ಕಾಟ ಇರಲ್ಲ ಅಂತ ನೆಮ್ಮದಿಯಿಂದ ಮತ್ತೆ ಬೆಟ್ಟ ಹತ್ತೋಕೆ ಹೋದ ಭಕ್ತರಿಗೆ ಚಿರತೆ ಜೊತೆಗೆ ಕರಡಿಯೂ ಕಾಟ ಕೊಟ್ಟಿದೆ.

ಭಕ್ತರು ಗುಂಪು ಗುಂಪಾಗಿ ಪಾದಚಾರಿ ಮಾರ್ಗದಲ್ಲಿ ಬೆಟ್ಟ ಹತ್ತಲು ಹೋಗಿದ್ದಾರೆ. ಆಗ ಲಕ್ಷ್ಮೀ ನರಸಿಂಹ ದೇವಾಲಯದ ಬಳಿ ಮರಗಳ ನಡುವೆ ಚಿರತೆ ಕಾಣಿಸಿಕೊಂಡಿದೆಯಂತೆ. ಚಿರತೆ ಕಂಡು ಭಯಗೊಂಡು ಓಡಿದ ಭಕ್ತರಿಗೆ ಸ್ವಲ್ಪ ಸಮಯದಲ್ಲಿಯೇ ಕರಡಿಯೂ ಕಾಣಿಸಿಕೊಂಡು ಆತಂಕದಲ್ಲಿ ಓಡಿದ್ದಾರೆ.

ಭಯಗೊಂಡ ಭಕ್ತರು ನೇರವಾಗಿ ಟಿಟಿಡಿ ಆಡಳಿತ ಮಂಡಳೊಗೆ ವಿಷಯ ತಿಳಿಸಿದ್ದಾರೆ. ಸದ್ಯ ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು, ಚಿರತೆ ಮತ್ತು ಕರಡಿ ಕಂಡ ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸುತ್ತಿದೆ. ಆದ್ರೆ ಈ ಘಟನೆಗಳಿಂದ ಭಕ್ತರು ಭಯಭೀತರಾಗಿದ್ದಾರೆ. ಮತ್ತೆ ಪಾದಚಾರಿ‌ ಮಾರ್ಗದಲ್ಲಿ ಸಂಚಾರ ಮಾಡುವುದು ಕಷ್ಡ ಸಾಧ್ಯವಾಗಿದೆ. ಯಾಕಂದ್ರೆ ಇತ್ತಿಚೆಗಷ್ಟೇ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಈಗ ಮತ್ತೊಂದು ಚುರತೆ ಕಾಣಿಸಿಕೊಂಡಿರುವುದು, ಇನ್ನು ಅದೆಷ್ಟು ಚಿರತೆಗಳು ಇದ್ದಾವೊ ಎಂಬ ಭಯ ಉಂಟು ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

error: Content is protected !!