ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ತುಮಕೂರು: ದೇವರ ವೇಶ, ನಾಗಸಾಧುಗಳು ಎಂದರೆ ಜನರಿಗೆ ಭಯ ಭಕ್ತಿ ಜಾಸ್ತಿ. ಹೀಗಾಗಿಯೇ ಅಂಗಡಿ ಬಳಿಯೋ ಮನೆ ಬಳಿಯೋ ಬಂದರೆ ದೇವರಂತೆ ಟ್ರೀಟ್ ಮಾಡುತ್ತಾರೆ. ಭಕ್ತಿಗೆ ಕಾಣಿಕೆಯನ್ನು ಕೊಡುತ್ತಾರೆ. ಆದರೆ ಈ ರೀತಿ ಭಕ್ತಿ, ಗೌರವ ತೋರಿಸಲು ಹೋದವರಿಗೆ ಮೋಸವಾಗಿದೆ. ಆದರೆ ಅವರು ನಕಲಿ ಸಾಧುಗಳಾಗಿದ್ದಾರೆ.
ನಗರದ ಎಂಜಿ ರೋಡಲ್ಲಿ ಮಲ್ನಾಡ್ ಎಂಬ ಸ್ಟುಡಿಯೋ ಇದೆ. ಆ ಸ್ಟುಡಿಯೋಗೆ ನಕಲಿ ಸಾಧುಗಳು ಎಂಟ್ರಿ ಕೊಟ್ಡಿದ್ದಾರೆ. ಬಳಿಕ ಸ್ಟುಡಿಯೋ ಮಾಲೀಕ ಚಂದ್ರು ಅವರ ಕೈಗೆ ರುದ್ರಾಕ್ಷಿ ಹಾಕಿದ್ದಾರೆ. ಬಳಿಕ ಎರಡು ಕೈಹಿಡಿದು ಮಂತ್ರ ಹೇಳಲು ಶುರು ಮಾಡಿದ್ದಾರೆ. ಧ್ಯಾನ ಮಾಡುವುದಕ್ಕೆ ಹೇಳಿ ಚಂದ್ರು ಕೈಲಿದ್ದ ಉಂಗುರವನ್ನೇ ಬಿಚ್ಚಿಕೊಂಡಿದ್ದಾರೆ. ಏನೇನೋ ಮಂತ್ರ ಹೇಳಿಕೊಟ್ಟು ಒಳ್ಳೆಯದ್ದಾಗುತ್ತೆ ಎಂದು ನಂಬಿಸಿದ್ದಾರೆ.
ನಕಲಿ ಸಾಧುಗಳ ಮಾತನ್ನು ನಂಬಿ ಮಾಲೀಕ ಚಂದ್ರು ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಆದ್ರೆ ಧ್ಯಾನದಿಂದ ಹೊರ ಬಂದ ಮೇಲೆ ಗೊತ್ತಾಗಿದ್ದು, ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಮಾಲೀಕ ಚಂದ್ರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಸಾಧುಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಇಬ್ಬರು ನಕಲಿ ಸಾಧುಗಳು ಈ ಕೃತ್ಯ ನಡೆಸಿದ್ದಾರೆ. ಹತ್ತಿರದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.


ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್