Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಹಾಗೂ ಅಶ್ವತ್ಥ್ ನಾರಾಯಣ್ ನಡುವೆ ಮಾತಿನ ಚಕಮಕಿ : ಸವದಿ, ಸಿದ್ದರಾಮಯ್ಯರಿಂದ ಬೆಂಬಲ

Facebook
Twitter
Telegram
WhatsApp

 

 

ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಜೆಪಿ ನಾಯಕರ ವಿರುದ್ಧ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಲತಿರುಗಿ ಬಿದ್ದಿದ್ದಾರೆ. ರೀ..ರೀ ಡಾಕ್ಟ್ರೇ ನಿಮ್ಗೆ ತಾಕತ್ ಇದ್ರೆ ಮಲ್ಲೇಶ್ವರಂನಲ್ಲಿ ಕಾಂಗ್ರೆಸ್ ನಿಂದ ಗೆದ್ದು ತೋರಿಸ್ರಿ ನೋಡೋಣಾ. ನಾನು ನಿಮಗೆ ಸವಾಲು ಹಾಕ್ತೀನಿ. ಯಾಕೆ ಸುಮ್ಮನೆ ಮಾತನಾಡ್ತೀರಿ. ಬಡವೆಇಗೆ ನೀಡುವ ಅಕ್ಕಿಯನ್ನು ಕೇಂದ್ರ ಸರ್ಕಾರ ಯಾಕೆ ನೀಡುತ್ತಿಲ್ಲ. ಇದೇನಾ ಒಕ್ಕೂಟ ವ್ಯವಸ್ಥೆ..? ಕೊಟ್ಟು ತೆಗೆದುಕೊಳ್ಳೋದೆ ಒಕ್ಕೂಟ ವ್ಯವಸ್ಥೆ.

ಯಾಕೆ ಕೊರೊನಾ ಸಮಯದಲ್ಲಿ ನಾವೂ ನಿಮಗೆ ಸಹಕಾರ ನೀಡಲಿಲ್ವಾ. ಭಾರತ ಮಾತೆಗೆ ಜೈ ಅಂತ ಯಾಕೆ ಹೇಳ್ತೀವಿ ಹೇಳಿ. ಮೊದಲು ಅಕ್ಕಿ ಕೊಡುವುದಾಗಿ ಹೇಳಿ, ಆಮೇಲೆ ಯಾಕೆ ಕೊಡಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ತನಕ ಬಿಡಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಶಿವಲಿಂಗೇಗೌಡರಿಗೆ ಬೆಂಬಲ ನೀಡಿ, ಅಶ್ವತ್ಥ್ ನಾರಾಯಣ್, ನೀವೂ ಸಚಿವರಾಗಿದ್ದವರು, ಡಿಸಿಎಂ ಆಗಿದ್ದವರು ಅವರು ಮಾತನಾಡುವಾಗ ಎದ್ದು ನಿಂತು ಡಿಸ್ಟರ್ಬ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು ದಿನ ಜೆಡಿಎಸ್ ನಲ್ಲಿ ಏನು ಹರಿದ್ರಿ. ಕಾಂಗ್ರೆಸ್ ಗೆ ಹೋಗಿ ಏನು ಹರಿದ್ರಿ ಅನ್ನೋದನ್ನ ಮೊದಲು ಹೇಳಿ ಎಂದಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ಪಾಪ ನೀವ್ಯಾಕೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತೀರಿ. ಪಾಪ ಅವರೆಲ್ಲ ಕಾಂಪಿಟೇಷನ್ ಲೈನ್ ನಲ್ಲಿದ್ದಾರೆ. ಯಾರು ಹೆಚ್ಚು ಮಾತಾಡ್ತಾರೆ, ಕಡಿಮೆ ಮಾತಾಡ್ತಾರೆ ಅನ್ನೋದು ಅಲ್ಲಿ ಕೌಂಟ್ ಆಗುತ್ತೆ. ಅಲ್ಲಿ ಮಾರ್ಕ್ಸ್ ಬರುತ್ತೆ ಎಂದು ಗೇಲಿ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!