Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಹಾಗೂ ಅಶ್ವತ್ಥ್ ನಾರಾಯಣ್ ನಡುವೆ ಮಾತಿನ ಚಕಮಕಿ : ಸವದಿ, ಸಿದ್ದರಾಮಯ್ಯರಿಂದ ಬೆಂಬಲ

Facebook
Twitter
Telegram
WhatsApp

 

 

ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಜೆಪಿ ನಾಯಕರ ವಿರುದ್ಧ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಲತಿರುಗಿ ಬಿದ್ದಿದ್ದಾರೆ. ರೀ..ರೀ ಡಾಕ್ಟ್ರೇ ನಿಮ್ಗೆ ತಾಕತ್ ಇದ್ರೆ ಮಲ್ಲೇಶ್ವರಂನಲ್ಲಿ ಕಾಂಗ್ರೆಸ್ ನಿಂದ ಗೆದ್ದು ತೋರಿಸ್ರಿ ನೋಡೋಣಾ. ನಾನು ನಿಮಗೆ ಸವಾಲು ಹಾಕ್ತೀನಿ. ಯಾಕೆ ಸುಮ್ಮನೆ ಮಾತನಾಡ್ತೀರಿ. ಬಡವೆಇಗೆ ನೀಡುವ ಅಕ್ಕಿಯನ್ನು ಕೇಂದ್ರ ಸರ್ಕಾರ ಯಾಕೆ ನೀಡುತ್ತಿಲ್ಲ. ಇದೇನಾ ಒಕ್ಕೂಟ ವ್ಯವಸ್ಥೆ..? ಕೊಟ್ಟು ತೆಗೆದುಕೊಳ್ಳೋದೆ ಒಕ್ಕೂಟ ವ್ಯವಸ್ಥೆ.

ಯಾಕೆ ಕೊರೊನಾ ಸಮಯದಲ್ಲಿ ನಾವೂ ನಿಮಗೆ ಸಹಕಾರ ನೀಡಲಿಲ್ವಾ. ಭಾರತ ಮಾತೆಗೆ ಜೈ ಅಂತ ಯಾಕೆ ಹೇಳ್ತೀವಿ ಹೇಳಿ. ಮೊದಲು ಅಕ್ಕಿ ಕೊಡುವುದಾಗಿ ಹೇಳಿ, ಆಮೇಲೆ ಯಾಕೆ ಕೊಡಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ತನಕ ಬಿಡಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಶಿವಲಿಂಗೇಗೌಡರಿಗೆ ಬೆಂಬಲ ನೀಡಿ, ಅಶ್ವತ್ಥ್ ನಾರಾಯಣ್, ನೀವೂ ಸಚಿವರಾಗಿದ್ದವರು, ಡಿಸಿಎಂ ಆಗಿದ್ದವರು ಅವರು ಮಾತನಾಡುವಾಗ ಎದ್ದು ನಿಂತು ಡಿಸ್ಟರ್ಬ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು ದಿನ ಜೆಡಿಎಸ್ ನಲ್ಲಿ ಏನು ಹರಿದ್ರಿ. ಕಾಂಗ್ರೆಸ್ ಗೆ ಹೋಗಿ ಏನು ಹರಿದ್ರಿ ಅನ್ನೋದನ್ನ ಮೊದಲು ಹೇಳಿ ಎಂದಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ಪಾಪ ನೀವ್ಯಾಕೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತೀರಿ. ಪಾಪ ಅವರೆಲ್ಲ ಕಾಂಪಿಟೇಷನ್ ಲೈನ್ ನಲ್ಲಿದ್ದಾರೆ. ಯಾರು ಹೆಚ್ಚು ಮಾತಾಡ್ತಾರೆ, ಕಡಿಮೆ ಮಾತಾಡ್ತಾರೆ ಅನ್ನೋದು ಅಲ್ಲಿ ಕೌಂಟ್ ಆಗುತ್ತೆ. ಅಲ್ಲಿ ಮಾರ್ಕ್ಸ್ ಬರುತ್ತೆ ಎಂದು ಗೇಲಿ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!